ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೇಲ್ಮನವಿ ಸಲ್ಲಿಸದಿದ್ದರೆ ಕೇಂದ್ರದಿಂದ ಗ್ಯಾಜೆಟ್ ಅಧಿಸೂಚನೆ
ಚೆನ್ನೈ: ಕರ್ನಾಟಕ ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನ ವಿರುದ್ಧ ನಿಗದಿತ 90ದಿನಗಳೊಳಗೆ ಮೇಲ್ಮನವಿ ಸಲ್ಲಿಸದಿದ್ದಲ್ಲಿ, ಕೇಂದ್ರ ಸರ್ಕಾರ ಗ್ಯಾಜೆಟ್ ಅಧಿಸೂಚನೆ ಹೊರಡಿಸಲಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ಸೈಫುದ್ದಿನ್ ಸೋಸ್ ಹೇಳಿದ್ದಾರೆ.
ಮಂಗಳವಾರ(ಫೆಬ್ರವರಿ 06) ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ತೀರ್ಪನ್ನು ಒಂದು ವರ್ಷದೊಳಗೆ ಹಂತಹಂತವಾಗಿ ಜಾರಿ ಮಾಡಲಾಗುವುದು. ಸುಪ್ರೀಂ ಕೋರ್ಟ್ನ ಮಾರ್ಗದರ್ಶಕ ಸೂತ್ರಗಳ ಅನುಗುಣವಾಗಿ ತೀರ್ಪು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಆದೇಶ ಜಾರಿಗೊಳಿಸಲು ನಿರಾಕರಿಸಿದರೆ ಕೇಂದ್ರ ಏನು ಮಾಡಲಿದೆ ಎಂದು ಕೇಳಲಾದ ಪ್ರಶ್ನೆಗೆ, ಕರ್ನಾಟಕ ಹೇಗೆ ನಿರಾಕರಿಸಬಲ್ಲದು ಎಂದು ಅವರು ಮರುಪ್ರಶ್ನೆ ಹಾಕಿದರು.(ಏಜನ್ಸೀಸ್)
Story first published: Wednesday, February 7, 2007, 5:30 [IST]