ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರುಣಸಾಗರ ಮುನಿ ಅಸ್ವಸ್ಥ : ಚಿಕಿತ್ಸೆಗಾಗಿ ವೈದ್ಯರ ದೌಡು

By Staff
|
Google Oneindia Kannada News

ಮಂಗಳೂರು : ಕ್ರಾಂತಿಕಾರಿ ಸಂತ ಆಚಾರ್ಯ ತರುಣಸಾಗರ ಮುನಿ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಅವರನ್ನು ಧರ್ಮಸ್ಥಳದಿಂದ ಮಂಗಳೂರಿಗೆ ಡೋಲಿ(ಪಲ್ಲಕ್ಕಿ)ಯಲ್ಲಿ ಕರೆತರಲಾಗಿದೆ.

ತರುಣಸಾಗರ ಮುನಿಗಳನ್ನು ನಾಲ್ಕು ಜನರು ಡೋಲಿಯಲ್ಲಿ ಹೊತ್ತುಕೊಂಡು, ಕಾಲ್ನಡಿಗೆಯಲ್ಲಿ ಧರ್ಮಸ್ಥಳದಿಂದ ಮಂಗಳೂರಿನವರೆಗಿನ 75ಕಿಲೋ ಮೀಟರ್‌ ದೂರವನ್ನು, ಎರಡು ದಿನಗಳಲ್ಲಿ ಕ್ರಮಿಸಿದ್ದಾರೆ.

ಈ ಕುರಿತು ಎಸ್‌ಡಿಎಂ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸೋದರ ಸುರೇಂದ್ರಕುಮಾರ್‌ ಮಾಹಿತಿ ನೀಡಿದ್ದು, ಖ್ಯಾತ ನರರೋಗತಜ್ಞ ಡಾ.ಸಿ.ಕೆ.ಬಲ್ಲಾಳ್‌ ನೇತೃತ್ವದ ವೈದ್ಯ ತಂಡ ಸ್ವಾಮೀಜಿಗಳ ಆರೋಗ್ಯ ತಪಾಸಣೆ ನಡೆಸಲಿದೆ. ಇದಲ್ಲದೆ ಬೆಂಗಳೂರಿನ ಜೈನ್‌ ಆಸ್ಪತ್ರೆ ಮತ್ತು ಧಾರವಾಡದ ವೈದ್ಯರು ಮಂಗಳವಾರ ನಗರಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X