ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಮಿಳುನಾಡು-ಕರ್ನಾಟಕ ನಡುವಿನ ಬಸ್ ಸಂಚಾರ ಸ್ಥಗಿತ
ಸೇಲಂ(ತಮಿಳುನಾಡು): ಕರ್ನಾಟಕ ಪ್ರವೇಶಿಸುವ ತಮಿಳುನಾಡು ಸಾರಿಗೆ ನಿಗಮದ ಬಸ್ ಸೇವೆ, ಸೋಮವಾರ ಸ್ಥಗಿತಗೊಂಡಿದೆ.
ಕಾವೇರಿ ನ್ಯಾಯಮಂಡಲಿ ತೀರ್ಪಿನ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ, ಅಂತಾರಾಜ್ಯಗಳ ನಡುವಿನ ಎಲ್ಲಾ ಬಸ್ಗಳ ಸೇವೆಯನ್ನು ತಮಿಳುನಾಡು ಸಾರಿಗೆ ನಿಗಮ ರದ್ದುಪಡಿಸಿದೆ.
ಸೇಲಂ-ಬೆಂಗಳೂರು, ಸೇಲಂ-ಮೈಸೂರು, ಈರೋಡು-ಬೆಂಗಳೂರು, ಈರೋಡು-ಮೈಸೂರು ನಡುವಿನ ಬಸ್ ಸೇವೆ ರದ್ದಾಗಿದೆ. ಈ ಮುಂಚೆ ಸೇವೆ ಆರಂಭಿಸಿರುವ ಬಸ್ಗಳು, ಗಡಿ ತನಕ ಸಾಗಲಿವೆ. ರಾಜ್ಯದ ಗಡಿ ಮತ್ತು ಮೆಟ್ಟೂರು ಜಲಾಶಯಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ.
(ಏಜನ್ಸೀಸ್)
Comments
Story first published: Monday, February 5, 2007, 5:30 [IST]