ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನ್ಯಾಯಕ್ಕಾಗಿ ಸು. ಕೋರ್ಟ್ಗೆ ಮೊರೆ -ಯಡಿಯೂರಪ್ಪ
ಬೆಂಗಳೂರು : ಸೋಮವಾರ ಹೊರಬಿದ್ದ ಕಾವೇರಿ ನ್ಯಾಯಮಂಡಳಿಯ ತೀರ್ಪಿಗೆ, ವ್ಯಾಪಕ ವಿರೋಧ ಮತ್ತು ಅಸಮಾಧಾನ ಕರ್ನಾಟಕದಲ್ಲಿ ಕಂಡು ಬಂದಿದೆ.
ನ್ಯಾಯಮಂಡಳಿಯ ವರದಿ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ನ್ಯಾಯಕೇಳುವುದಾಗಿ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ತೀರ್ಪನ್ನು ದುರದೃಷ್ಟಕರ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯಬಣ್ಣಿಸಿದ್ದಾರೆ.
ಬಿಗಿ ಬಂದೋಬಸ್ತು : ತೀರ್ಪಿನ ಹಿನ್ನೆಲೆ ಉಂಟಾಗಬಹುದಾದ ಗಲಭೆ ತಪ್ಪಿಸಲು ಬೆಂಗಳೂರಿನಲ್ಲಿ 700ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಕಾವೇರಿ ಕಣಿವೆಯಲ್ಲಿ ಆತಂಕ ಮಡುಗಟ್ಟಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, February 5, 2007, 5:30 [IST]