ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಕಾರ್ತದಲ್ಲಿ ಮಹಾಪೂರ: ಲಕ್ಷಾಂತರ ಮಂದಿ ನಿರ್ವಸಿತ

By Staff
|
Google Oneindia Kannada News

ಜಕಾರ್ತ(ಇಂಡೋನೇಷಿಯಾ ರಾಜಧಾನಿ): ಸತತ ಮಳೆ ಸುರಿಯುತ್ತಿರುವುದರಿಂದ ಜಕಾರ್ತದಲ್ಲಿ ಮಹಾಪೂರ ಬಂದಿದ್ದು, ಕನಿಷ್ಠ 5ಜನ ಮೃತಪಟ್ಟು ಸುಮಾರು 1,45,000 ಜನ ನಿರ್ವಸಿತರಾಗಿದ್ದಾರೆ.

ಶುಕ್ರವಾರ(ಫೆಬ್ರವರಿ 02)ದಿಂದ ಎಡೆಬಿಡದೆ ಮಳೆ ಬೀಳುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ರಾಡಿ ಮಿಶ್ರಿತ ನೀರು ನಗರದ ಮನೆಗಳಲ್ಲಿ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಪ್ರವೇಶಿಸಿದೆ. ಹಾಗಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ನಗರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳತ್ತ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಕೆಲವು ಪ್ರದೇಶಗಳಲ್ಲಿ 4ಮೀಟರ್‌ಗಿಂತಲೂ ಹೆಚ್ಚು ಆಳದ ನೀರು ನಿಂತಿದೆ. ಸುಮಾರು 20,000ಮನೆ, ಶಾಲೆ ಮತ್ತು ಆಸ್ಪತ್ರೆಗಳು ನೀರಲ್ಲಿ ನಿಂತಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿದ್ಯುತ್‌ ಮತ್ತು ನೀರು ಸರಬರಾಜು ನಿಲ್ಲಿಸಿದ್ದಾರೆ. ಸಾರಿಗೆ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X