ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೇಬಿಸ್ ಚುಚ್ಚುಮದ್ದು ಕೆ.ಸಿ.ಜನರಲ್ ಆಸ್ಪತ್ರೆಯಲ್ಲೇ ಇಲ್ಲ!
ಬೆಂಗಳೂರು : ನಗರದ ಪ್ರಮುಖ ಆಸ್ಪತ್ರೆಯಾದ ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಗೆ, ಕಳೆದ ಎರಡು ತಿಂಗಳಿಂದ ರೇಬಿಸ್ ಚುಚ್ಚುಮದ್ದು ಪೂರೈಕೆಯಾಗಿಲ್ಲ .
ಲೋಕಾಯುಕ್ತ ಸಂತೋಷ್ ಹೆಗಡೆ ಮತ್ತು ಉಪಲೋಕಾಯುಕ್ತರ ಪತ್ರಿ ಬಸವನಗೌಡ, ಆಕಸ್ಮಿಕವಾಗಿ ಕೆ.ಸಿ.ಜನರಲ್ಆಸ್ಪತ್ರೆಗೆ ಭೇಟಿ ನೀಡಿದಾಗ, ಈ ಅಂಶ ಬೆಳಕಿಗೆ ಬಂದಿದೆ.
ದಿನೇದಿನೇ ರಾಜಧಾನಿ ನಗರಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚುತ್ತಲೇ ಇದೆ. ಇಂತಹ ಸಂದರ್ಭದಲ್ಲೂ ಕೆ.ಸಿ.ಜನರಲ್ ಆಸ್ಪತ್ರೆ ಸೇರಿದಂತೆ, ವಿವಿಧ ಆಸ್ಪತ್ರೆಗಳಿಗೆ ರೇಬಿಸ್ ಚುಚ್ಚುಮದ್ದು ಪೂರೈಕೆಯಾಗದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, February 1, 2007, 5:30 [IST]