ಕಲಾಂ ಕೇಶ ವಿನ್ಯಾಸದ ಮೇಲೇಕೊ ಠಾಕ್ರೆಗೆ ಭರ್ಜರಿ ಕೋಪ
ಮುಂಬಯಿ : ರಾಷ್ಟ್ರಪತಿ ಅಬ್ದುಲ್ ಕಲಾಂ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕಟುವಾಗಿ ಟೀಕಿಸುವ ಮೂಲಕ, ಶಿವಸೇನಾ ವರಿಷ್ಠ ಬಾಳ್ ಠಾಕ್ರೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಬೃಹತ್ ಮುಂಬಯಿ ನಗರಪಾಲಿಕೆ ಚುನಾವಣಾ ನಿಮಿತ್ತ ಪ್ರಚಾರಮಗ್ನವಾಗಿರುವ ಅವರು, ತಮ್ಮ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಸತ್ತಿನ ಮೇಲೆ ದಾಳಿ ನಡೆಸಿದ ಮೊಹಮ್ಮದ್ ಅಫ್ಜಲ್ ಗುರು ಮರಣದಂಡನೆ ಕುರಿತು ಪ್ರತಿಕ್ರಿಯಿಸಿದ ಅವರು, ಈಗ ಏನು ನಡೆಯುತ್ತಿದೆ ಎಂಬುದನ್ನು ರಾಷ್ಟ್ರಪತಿಗಳು ನೋಡಲಾರರು. ಅವರ ಉದ್ದನೆಯ ಕೂದಲು ಅವರ ಕಣ್ಣುಗಳ ಮುಂದೆ ಬಂದಿವೆ. ಹಾಗಾಗಿ ಅವರ ಕಣ್ಣುಗಳ ಮುಂದೆ ಏನು ನಡೆಯುತ್ತಿದೆ ಎಂಬುದನ್ನು ಅವರು ನೋಡಲಾರರು ಎಂದು ಠಾಕ್ರೆ ಟೀಕಿಸಿದರು.
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಬಿರುನುಡಿಗಳನ್ನು ರಾಷ್ಟ್ರಪತಿಯಾಬ್ಬರಿಗೆ ಬಳಸಲಾಗಿದೆ. ಅದೂ ಸಾರ್ವಜನಿಕ ವೇದಿಕೆಯಾಂದರಲ್ಲಿ. ಯುಪಿಎ ಅಧ್ಯಕ್ಷೆ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನೂ ಟೀಕಿಸಿದ ಠಾಕ್ರೆ, ಈ ದೇಶ ವಿದೇಶೀಯರಿಂದ ಆಳಲ್ಪಡುತ್ತಿದೆ. ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಷಂಡರು ಎಂದು ಗುಡುಗಿದರು.
ಇಂತಹ ಅಸಾಂವಿಧಾನಿಕ ಪದಗಳನ್ನು ಸಾರ್ವಜನಿಕ ಭಾಷಣಗಳಲ್ಲಿ ಬಳಸುವುದರ ಮೇಲೆ ನಿರ್ಬಂಧ ಹೇರಬೇಕೇ ಅಥವಾ ಬೇಡವೇ ಎಂಬ ಕುರಿತು ಚರ್ಚೆ ಆರಂಭವಾಗುವ ಲಕ್ಷಣಗಳು ಕಂಡುಬಂದಿವೆ.
(ಏಜನ್ಸೀಸ್)