ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ತೆನೆ ಹೊತ್ತ ಮಹಿಳೆ’ಗಾಗಿ ಪಿ.ಜಿ.ಆರ್‌.ಸಿಂಧ್ಯ ಬಿಗಿಪಟ್ಟು

By Staff
|
Google Oneindia Kannada News

ಬೆಂಗಳೂರು : ಜೆಡಿಎಸ್‌ ಚಿಹ್ನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತಮ್ಮ ಪರ ತೀರ್ಪು ನೀಡದಿದ್ದರೆ, ಸುಪ್ರೀಂ ಕೋರ್ಟ್‌ ಮೊರೆಹೋಗಬೇಕಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್‌ನಿಂದ ಅಮಾನತುಗೊಂಡ ಶಾಸಕ ಪಿ.ಜಿ.ಆರ್‌.ಸಿಂಧ್ಯ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನಮ್ಮದೇ ನಿಜವಾದ ಜನತಾದಳವಾಗಿದ್ದು, ತೆನೆ ಹೊತ್ತ ಮಹಿಳೆಯ ಚಿಹ್ನೆ ನಮಗೇ ಸಿಗಬೇಕು ಎಂದರು.

ಜನತಾದಳ ರಾಷ್ಟ್ರೀಯ ಪಟ್ಟಿಯಲ್ಲಿರುವ ಪಕ್ಷವಾಗಿದ್ದು, ಕೇರಳ ಘಟಕ ಸುರೇಂದ್ರ ಮೋಹನ್‌ ಅವರ ನೇತೃತ್ವಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಜೆಡಿಎಸ್‌ ಎಂದರೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದ ವ್ಯವಹಾರವಾಗಿದೆ. ಇವೆಲ್ಲವನ್ನೂ ಚುನಾವಣಾ ಆಯೋಗಕ್ಕೆ ವಿವರಿಸಲಾಗುವುದು ಎಂದು ಸಿಂಧ್ಯ ಹೇಳಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X