ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಿತ್ರದುರ್ಗ ಜಿಲ್ಲೆಯಲ್ಲಿ ಪ್ಲಾಟಿನಂ ಅದಿರಿನ ನಿಕ್ಷೇಪ ಪತ್ತೆ
ಚಿತ್ರದುರ್ಗ : ಚಿತ್ರದುರ್ಗ ಹಾಗೂ ಅಲ್ಲಿನ ಕೋಟೆಗಳು ಹಲವು ನಿಗೂಢ ನಿಕ್ಷೇಪಗಳ ನೆಲೆಯಾಗಿ, ಎಷ್ಟೋ ಜನರನ್ನು ಕಾಡುತ್ತಿತ್ತು. ಈಗ ಅದಕ್ಕೆಲ್ಲ ಉತ್ತರ ಸಿಕ್ಕಿದೆ!
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹನುಮಾಳ ಪುರದಲ್ಲಿ, ಭಾರೀ ಪ್ರಮಾಣದ ಪ್ಲಾಟಿನಂ ಅದಿರಿನ ನಿಕ್ಷೇಪ ಪತ್ತೆಯಾಗಿದೆ. ಭಾರತೀಯ ಭೂಗರ್ಭ ಸರ್ವೇಕ್ಷಣಾ ಇಲಾಖೆ ನಡೆಸಿದ ಅಧ್ಯಯನದಿಂದ ಈ ವಿಷಯ ಬೆಳಕಿಗೆ ಬಂದಿದೆ ಎಂದು ಇಲಾಖೆಯ ಉಪನಿರ್ದೇಶಕ ಡಾ. ಎಸ್.ಕೆ .ಭೂಷಣ್ ಹೇಳಿದ್ದಾರೆ.
ಇನ್ನು ಹನುಮಾಳ ಪುರದ ಮಣ್ಣೆಲ್ಲಾ ಚಿನ್ನವಲ್ಲ , ಪ್ಲಾಟಿನಂಮಯ ಅಗುವ ಸಾಧ್ಯತೆಯಿದೆ. ಒಂದು ಟನ್ ಮಣ್ಣಿಗೆ 1 ಗ್ರಾಂ ಪ್ಲಾಟಿನಂ ದೊರೆಯುವ ಸಾಧ್ಯತೆಗಳಿದ್ದು, ಮಣ್ಣಿನ ಹಲವು ಮಾದರಿಗಳನ್ನು ವಿಜ್ಞಾನಿಗಳು ಸಂಗ್ರಹಿಸಿ ಅಧ್ಯಯನ ನಡೆಸಿದ್ದಾರೆ.
ಇನ್ನುಮುಂದೆ ಕರ್ನಾಟಕ ಚಿನ್ನದ ನಾಡು ಮಾತ್ರವಲ್ಲ, ಪ್ಲಾಟಿನಂ ನಾಡು ಹೌದು. ಅಂದ ಹಾಗೆ, ಚಿನ್ನ ಹಾಗೂ ವಜ್ರಕ್ಕಿಂತ ಪ್ಲಾಟಿನಂ ಲೋಹದ ಬೆಲೆ ಅಧಿಕ.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, January 30, 2007, 5:30 [IST]