ತ್ವರಿತ ಅಲರ್ಟ್ ಗಳಿಗಾಗಿ
For Daily Alerts
59ನೇ ಪುಣ್ಯತಿಥಿ : ರಾಷ್ಟ್ರಪಿತನಿಗೆ ಎರಡು ಹನಿ ಕಣ್ಣೀರು!
ನವದೆಹಲಿ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರಿಗೆ ರಾಷ್ಟ್ರ , ಮಂಗಳವಾರ ಗೌರವ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.
ಗಾಂಧೀಜಿ ಅವರ 59ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ , ರಾಜ್ಘಾಟ್ಗೆ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ, ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಸೇರಿದಂತೆ ವಿವಿಧ ಗಣ್ಯರು ಆಗಮಿಸಿ, ಪುಷ್ಪಗುಚ್ಛಗಳನ್ನಿರಿಸಿ, ಗೌರವ ಶ್ರದ್ಧಾಂಜಲಿ ಸಲ್ಲಿಸಿದರು.
ವಾಯುಪಡೆ, ನೌಕಾಪಡೆ, ಭೂಪಡೆಯ ಮುಖ್ಯಸ್ಥರು, ಗಾಂಧಿವಾದಿ ನಿರ್ಮಲ ದೇಶ್ಪಾಂಡೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಶ್ರದ್ಧಾಂಜಲಿ ಸಮಾರಂಭದಲ್ಲಿ ಎರಡು ನಿಮಿಷಗಳ ಕಾಲ ಮೌನ ಆಚರಿಸಿ, ಗಾಂಧಿ ಆತ್ಮಕ್ಕೆ ಶಾಂತಿ ಕೋರಲಾಯಿತು. ಭಜನೆ ಮತ್ತಿತರ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿವೆ.
ಇನ್ನೊಂದು ವಿಶೇಷವೆಂದರೆ, ಗಾಂಧೀಜಿ ಆರಂಭಿಸಿದ್ದ ಸತ್ಯಾಗ್ರಹಕ್ಕೆ ಈಗ ನೂರು ವರ್ಷ ತುಂಬಿದೆ.
(ಯುಎನ್ಐ)
Comments
Story first published: Tuesday, January 30, 2007, 5:30 [IST]