ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡ ಸಾಹಿತ್ಯ.ಕಾಂನ ಶೇಖರ್ಪೂರ್ಣಗೆ ಹೃದಯಾಘಾತ
ಬೆಂಗಳೂರು : ಕನ್ನಡಸಾಹಿತ್ಯ ಡಾಟ್ಕಾಂನ ಸಂಪಾದಕ ಶೇಖರಪೂರ್ಣ ಅವರಿಗೆ ಹೃದಯಾಘಾತವಾಗಿದೆ.
ಶುಕ್ರವಾರ (ಜ. 26) ಬೆಳಗ್ಗೆ ಹಠಾತ್ ಹೃದಯಾಘಾತಕ್ಕೆ ಒಳಗಾದ ಅವರನ್ನು, ಬಿ.ಟಿ.ಎಂ ಲೇಔಟ್ ಮುಖ್ಯರಸ್ತೆಯಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಸೋಮವಾರ ತಿಳಿಸಿವೆ.
ಅವರಿಗೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿದೆಯೆಂದು ಜಯದೇವ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಶೇಖರಪೂರ್ಣರ ಶೀಘ್ರ ಚೇತರಿಕೆಗೆ ‘ದಟ್ಸ್ ಕನ್ನಡ’ ಮತ್ತು ‘ಕನ್ನಡಸಾಹಿತ್ಯಡಾಟ್ಕಾಂ ಬೆಂಬಲಿಗರ ಬಳಗ’ ಹಾರೈಸಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, January 29, 2007, 5:30 [IST]