ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯ-ರಾಷ್ಟ್ರ : ಇಂದಿನ ಪ್ರಮುಖ ಸುದ್ದಿ ತುಣುಕುಗಳು
- ಬಾಲ ಭಿಕ್ಷುಕರಿಲ್ಲದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಕೇರಳದ ತಿರುವನಂತಪುರ ಪಾತ್ರ.
- ನವದೆಹಲಿಯ ಮಾಜಿ ಮುಖ್ಯಮಂತ್ರಿ ಮಂದನಲಾಲ್ ಖುರಾನ, ಉಮಾಭಾರತಿ ನೇತೃತ್ವದ ಭಾರತೀಯ ಜನ ಶಕ್ತಿ(ಬಿಜೆಎಸ್)ಯ ಕಾರ್ಯಾಧ್ಯಕ್ಷರಾಗಿ ಆಯ್ಕೆ.
- ಖ್ಯಾತ ಕಾದಂಬರಿಗಾರ್ತಿ ದಿವಂಗತ ತ್ರಿವೇಣಿ ಅವರ ಕೃತಿಗಳ ಅಧಾರಿತ, ‘ತ್ರಿವೇಣಿ ಸಂಗಮ’ ಮೆಗಾ ಧಾರಾವಾಹಿ ಈ ಟೀವಿ ವಾಹಿನಿಯಲ್ಲಿ ಸೋಮವಾರ ಸಂಜೆ 6ರಿಂದ ಶುರು. ಪ್ರತಿ ಸಂಜೆ ತ್ರಿವೇಣಿ ಸಂಗಮ!
- ಆಂಧ್ರಪ್ರದೇಶದಲ್ಲಿ ಪೊಲೀಸರ ಕಾರ್ಯಾಚರಣೆ. ಯುವತಿಯರ ಮಾರಾಟಜಾಲ ಪತ್ತೆ. 41ಬಾಲಕಿಯರಿಗೆ ತಪ್ಪಿದ ನರಕ ದರ್ಶನ!
- ನವದೆಹಲಿ, ಕೋಲ್ಕಾತ್ತಾದಲ್ಲಿ ಮಂಜೋ ಮಂಜು! ವಿಮಾನ ಯಾನಕ್ಕೆ ಕಷ್ಟವೋ ಕಷ್ಟ! ಮಂಗಳವಾರ ಹೇಗೋ?
- ಗಾಂಧೀಜಿ ಸತ್ಯಾಗ್ರಹಕ್ಕೆ ನೂರರ ಸಂಭ್ರಮ. ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ , ಗಾಂಧಿ ವಿಚಾರಧಾರೆಯ ಪ್ರಸ್ತುತತೆ ಕುರಿತು ಚರ್ಚಿಸಲೊಂದು ಸಮ್ಮೇಳನ.
Comments
Story first published: Monday, January 29, 2007, 5:30 [IST]