ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿ

By Staff
|
Google Oneindia Kannada News

ಮೈಸೂರು : ಕಬ್ಬು ಬೆಳೆಯನ್ನು ಉಳಿಸಿಕೊಳ್ಳುವುದು ಜಿಲ್ಲೆಯ ರೈತರಿಗೆ ಕಷ್ಟವಾಗಿದೆ. ಕಾಡಾನೆಗಳ ದಾಂಧಲೆ ಜಿಲ್ಲೆಯ ವಿವಿಧೆಡೆ ಹೆಚ್ಚುತ್ತಲೇ ಇದೆ.

ಇತ್ತೀಚೆಗೆ ಬ್ಯಾತಹಳ್ಳಿಯಲ್ಲಿನ ರೈತರ ಜಮೀನಿಗೆ ನುಗ್ಗಿ, ಏಳು ಆನೆಗಳು ಕಬ್ಬು ಬೆಳೆಯನ್ನು ಹಾಳು ಮಾಡಿವೆ. ಸೋಮನಹಳ್ಳಿ ಕೆರೆಗೆ ನೀರು ಕುಡಿಯಲು ಬಂದಿದ್ದ 3ಹೆಣ್ಣು ಮತ್ತು 4ಗಂಡಾನೆಗಳು, ಸಮೀಪದಲ್ಲಿಯೇ ಇದ್ದ ಜಮೀನಿಗೆ ನುಗ್ಗಿ ಮನಬಂದಂತೆ ತುಳಿದಾಡಿವೆ. ಕಬ್ಬಿನ ಗದ್ದೆ ಗಳು ಹಾಳಾದದ್ದನ್ನು ಗಂಡು ರೈತರು ಅಸಮಾಧಾನಗೊಂಡಿದ್ದಾರೆ.

ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆಗೆ ಇತ್ತೀಚೆಗೆ ಊರಿಗೆ ಬಂದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವುದೇ ಕೆಲಸವಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X