ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೃದಯದ ನೋವು ನೀಗಿಸಿದ ಮಂಜುನಾಥ್ಗೆ ಪದ್ಮಶ್ರೀ
ಬೆಂಗಳೂರು : 10ಸಾವಿರಕ್ಕೂ ಅಧಿಕ ಹೃದಯ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮುಗಿಸಿರುವ, ನಗರದ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್, ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮಂಜುನಾಥ್ರ ವೈದ್ಯಕೀಯ ಸೇವೆ ಗುರ್ತಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ನೀಡಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚೋಳೇನಹಳ್ಳಿಯ ಮಂಜುನಾಥ್, ಕಳೆದ 25ವರ್ಷಗಳಿಂದ ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹೃದ್ರೋಗ ಸಮಸ್ಯೆಗಳಿಗೆ ನೂತನ ಚಿಕಿತ್ಸಾ ಪದ್ಧತಿಯನ್ನು ಅವರು ರೂಪಿಸಿದ್ದು, ವಿದೇಶಗಳಲ್ಲಿ ಈ ವಿಧಾನ ಹೆಚ್ಚು ಜನಪ್ರಿಯವಾಗಿದೆ.
ಮಂಜುನಾಥ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಳಿಯ.
ರಾಜ್ಯದ ಇನ್ನಿಬ್ಬರಿಗೆ ಪದ್ಮಶ್ರೀ : ಇಸ್ರೊ ವಿಜ್ಞಾನಿ ಟಿ.ಕೆ.ಅಲೆಕ್ಸ್ ಮತ್ತು ಜವಾಹರಲಾಲ್ ನೆಹರೂ ಉನ್ನತ ಅಧ್ಯಯನ ಸಂಸ್ಥೆಯ ಪ್ರೊ.ಕೆ.ಎಸ್. ವಾಲ್ಡಿಯಾ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, January 27, 2007, 5:30 [IST]