ತ್ವರಿತ ಅಲರ್ಟ್ ಗಳಿಗಾಗಿ
For Daily Alerts
1000 : ರವೀಂದ್ರ ಕಲಾಕ್ಷೇತ್ರದಲ್ಲಿ ಸಿಂಡ್ರೆಲಾ ಮ್ಯಾಜಿಕ್!
ಬೆಂಗಳೂರು : ಪ್ರಭಾತ್ ಕಲಾವಿದರು ಜನವರಿ 29ರಂದು ತಮ್ಮ ಪ್ರಸಿದ್ಧ ನೃತ್ಯ ರೂಪಕ ‘ಸಿಂಡ್ರೆಲಾ’ದ ಮೂಲಕ, ಇನ್ನೊಂದು ಮೈಲಿಗಲ್ಲನ್ನು ದಾಟಲಿದ್ದಾರೆ.
ಈಗಾಗಲೇ ಸಿಂಡ್ರೆಲಾ ತಂಡ 999 ಪ್ರದರ್ಶನ ಮುಗಿಸಿದೆ. ಸಾವಿರದ ಗಡಿ ತಲುಪಲು ಕ್ಷಣಗಣನೆ ಆರಂಭಗೊಂಡಿದೆ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6:30ಕ್ಕೆ ಸಿಂಡ್ರೆಲಾ ನೃತ್ಯ ರೂಪಕ ನಡೆಯಲಿದ್ದು, ಈ ಪ್ರದರ್ಶನವನ್ನು ವೀಕ್ಷಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅತಿಥಿಯಾಗಿ ಅಗಮಿಸಲಿದ್ದಾರೆ. ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
1977ರಲ್ಲಿ ಹರಿಕಥಾ ವಿದ್ವಾನ್ ಗೋಪಿನಾಥ ದಾಸರ ನಿರ್ದೇಶನದಲ್ಲಿ, ಸಿಂಡ್ರೆಲಾ ಮೊದಲ ಪ್ರದರ್ಶನ ಕಂಡಿತ್ತು. ಈಗ ಹೊಸ ದೃಶ್ಯ ಹಾಗೂ ಶ್ರವ್ಯ ಉಪಕರಣಗಳನ್ನು ತಂಡ ಅಳವಡಿಸಿಕೊಂಡಿದೆ.
ಸಿಂಡ್ರೆಲಾ ಪಾತ್ರ ನಿರ್ವಹಿಸಿ ಮನೆಮಾತಾಗಿದ್ದ ಕಿರುತೆರೆ ನಟಿ ದೀಪಾಶ್ರೀ, ಅವರು ಈ ರೂಪಕದಲ್ಲಿ ಅದೇ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, January 27, 2007, 5:30 [IST]