ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿಕ್ಷೆಗೆ ತಡೆ : ಸಿಧುಗೆ ಸುಪ್ರೀಂ ಕೋರ್ಟ್ ಆಶೀರ್ವಾದ!
ನವದೆಹಲಿ : ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮಾಜಿ ಕ್ರಿಕೆಟಿಗ-ಮಾಜಿ ಸಂಸದ ನವಜೋಧ್ ಸಿಂಗ್ ಸಿಧು ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಗ್ರೀನ್ ಸಿಗ್ನಲ್ ನೀಡಿದೆ.
ಕೊಲೆ ಪ್ರಕರಣದಲ್ಲಿ ದೋಷಿಯೆಂದು ಹೈಕೋರ್ಟ್ ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್, ಸಿಧು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ. ಹೀಗಾಗಿ ಅಮೃತಸರ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಸಿಧು ಚಿಂತನೆ ನಡೆಸಿದ್ದಾರೆ.
1988ರಲ್ಲಿ ಪಾರ್ಕಿಂಗ್ಗಾಗಿ ನಡೆದ ಜಗಳದಲ್ಲಿ ಗುರ್ನಾಮ್ ಸಿಂಗ್ ಎಂಬುವವನನ್ನು ಥಳಿಸಿ ಕೊಲೆಗೈದ ಅರೋಪ, ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ಹೈಕೋರ್ಟ್ ಸಿಧು ಅವರನ್ನು ದೋಷಿಯೆಂದು ಗುರ್ತಿಸಿತ್ತು. ಹೈಕೋರ್ಟ್ ತೀರ್ಪನ್ನು, ಸಿಧು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
(ಏಜನ್ಸೀಸ್)
Comments
Story first published: Tuesday, January 23, 2007, 5:30 [IST]