ಶಿವಾಜಿನಗರದ ಗಲಭೆ ಮಧ್ಯೆಯೂ ಸಮಾಧಾನದ ಸುದ್ದಿ!
ಬೆಂಗಳೂರು : ಶಿವಾಜಿನಗರದ ಗಲಭೆ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಬೃಹತ್ ಬಹಿರಂಗ ಸಭೆ, ಮೆರವಣಿಗೆ ಮತ್ತು ರ್ಯಾಲಿ ನಡೆಸಲು ಅವಕಾಶ ನೀಡದಿರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಂದಿನ ಅಧಿವೇಶನದಲ್ಲಿ ಹೊಸ ಕಾಯ್ದೆ ತಂದು ಬಹಿರಂಗ ಸಭೆಗಳು ಮತ್ತು ಕೋಮು ಭಾವನೆ ಕೆರಳಿಸುವ ಬ್ಯಾನರ್, ಭಿತ್ತಿಪತ್ರಗಳನ್ನು ನಗರದಲ್ಲಿ ನಿಷೇಧಿಸಲಾಗುವುದು ಎಂದಿದ್ದಾರೆ.
ಶಿವಾಜಿನಗರದ ಗಲಭೆಯಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಒಂದು ಲಕ್ಷ, ಗುಂಡೇಟಿನಿಂದ ಗಾಯಗೊಂಡಿರುವವರಿಗೆ ತಲಾ 25ಸಾವಿರ ರೂ. ಪರಿಹಾರ ಧನ ನೀಡಲು ಸರ್ಕಾರ ಮುಂದಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಕಿರಿಕಿರಿ ಮುಗಿಯುವುದೇ? : ರಾಜಧಾನಿ ನಗರದಲ್ಲಿ ದಿನಕ್ಕೊಂದು ರ್ಯಾಲಿ, ಬಹಿರಂಗ ಸಭೆ ಸಾಮಾನ್ಯವಾಗಿಬಿಟ್ಟಿದೆ. ಆ ಪರಿಣಾಮ ಸಂಚಾರ ಅಸ್ತವ್ಯಸ್ತ, ತಾಸುಗಟ್ಟಲೇ ಸಮಯ ಹಾಳು. ಹೀಗಾಗಿ ಬೃಹತ್ ಬಹಿರಂಗ ಸಭೆ ಮತ್ತು ರ್ಯಾಲಿಗಳನ್ನು ಸರ್ಕಾರ ನಿರ್ಬಂಧಿಸುವುದು ಸೂಕ್ತ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಈ ಬಗ್ಗೆ ನೀವೇನಂತೀರಾ?
(ದಟ್ಸ್ ಕನ್ನಡ ವಾರ್ತೆ)