ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಕ್ರೆೃಂ ಸ್ಟೋರಿ’ ಬಾಲಕೃಷ್ಣ ಕಾಕತ್ಕರ್ಪತ್ನಿ ಸೈನೈಡ್ಗೆ ಶರಣು
ಬೆಂಗಳೂರು : ಉದಯ ಟೀವಿಯ ಕ್ರೆೃಂ ಸ್ಟೋರಿ ಖ್ಯಾತಿಯ ಪತ್ರಕರ್ತ ಬಾಲಕೃಷ್ಣ ಕಾಕತ್ಕರ್ ಪತ್ನಿ ಮನೋರಮಾ(36) ಗುರುವಾರ ಬೆಳಗ್ಗೆ ನಗರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜ್ಞಾನಭಾರತಿಯ ನಾಗರಬಾವಿಯ ತಮ್ಮ ಮನೆಯಲ್ಲಿ ಮನೋರಮಾ ಸೈನೈಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ನಡೆದ ಅರ್ಧ ಗಂಟೆ ಅವಧಿಯಲ್ಲಿಯೇ, ಅವರ ಸೋದರ ಸಂಬಂಧಿ ಇಂದುಶೇಖರ್ ಭಿಡೆ(32) ಸಹಾ ತಾವರೆಕೆರೆ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗಳಿಗೆ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ.
ಮನೋರಮಾ ಮತ್ತು ಇಂದುಶೇಖರ್ ಜಂಟಿಯಾಗಿ ವಿಸಿಡಿಗಳನ್ನು ಡಿವಿಡಿಗೆ ಪರಿವರ್ತಿಸುವ ವ್ಯವಹಾರವನ್ನು ನಡೆಸುತ್ತಿದ್ದರು. ವ್ಯವಹಾರದಲ್ಲಿ ಉಂಟಾದ ಆರ್ಥಿಕ ನಷ್ಟದಿಂದ ಮನೋರಮಾ ಕಂಗೆಟ್ಟಿದ್ದರು. ಮಾನಸಿಕವಾಗಿ ನೊಂದಿದ್ದಳು ಎಂದು ಬಾಲಕೃಷ್ಣ ಕಾಕತ್ಕರ್ ಹೇಳಿದ್ದಾರೆ.
ದೂರು ದಾಖಲಿಸಿಕೊಂಡಿರುವ ಜ್ಞಾನಭಾರತಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, January 19, 2007, 5:30 [IST]