ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರ್ಕಾರಿ ಭೂಮಿ ನುಂಗಲು 300ಅಧಿಕಾರಿಗಳಿಂದ ನೆರವು!
ಬೆಂಗಳೂರು: ಒಟ್ಟು 300 ಹಾಲಿ ಮತ್ತು ಮಾಜಿ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಭೂಮಿ ಒತ್ತುವರಿಯಲ್ಲಿ ಶಾಮೀಲಾಗಿದ್ದಾರೆ, ಎಂದು ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದ ವಿಧಾನಮಂಡಲ ಜಂಟಿಸದನ ಸಮಿತಿ ಹೇಳಿದೆ.
ರಾಮಸ್ವಾಮಿ ನೇತೃತ್ವದ ಸಮಿತಿ, ಭೂಗಳ್ಳರಿಗೆ ನೆರವು ನೀಡಿದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಅಧಿಕಾರಿಗಳ ಪಟ್ಟಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಿದೆ. ಇದಕ್ಕೆ ಸಹಕರಿಸಿದ ರಾಜಕಾರಣಿಗಳ ಹೆಸರನ್ನೂ ಸಮಿತಿ ಸದ್ಯದಲ್ಲೇ ಒಪ್ಪಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿರುವ ಸಮಿತಿ, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದೂ ಸೇರಿದಂತೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದೆ.
(ಏಜನ್ಸೀಸ್)
Comments
Story first published: Friday, January 19, 2007, 5:30 [IST]