ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಾನಪದ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಯಾರ್ಯಾರಿಗೆ?
ಬೆಂಗಳೂರು : ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ 2006ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ.
ಅಕಾಡೆಮಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗೌರವ ಪ್ರಶಸ್ತಿಗೆ ಜಾನಪದ ತಜ್ಞರಾದ ನಾಗಮಂಗಲದ ಹ.ಕ.ರಾಜೇಗೌಡ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಸವರಾಜ ನೆಲ್ಲೀಸರ ಆಯ್ಕೆಯಾಗಿದ್ದಾರೆ.
ಹ.ಕ.ರಾಜೇಗೌಡ ಡಾ.ಬಿ.ಎಸ್.ಗದ್ದಗೀಮಠ ಪ್ರಶಸ್ತಿ ಹಾಗೂ ಬಸವರಾಜ ನೆಲ್ಲೀಸರ ಡಾ.ಜೀ.ಶಂ.ಪರಮಶಿವಯ್ಯ ಪ್ರಶಸ್ತಿ ಪಡೆಯಲಿದ್ದಾರೆ. ಈ ಪ್ರಶಸ್ತಿಗಳು ತಲಾ 10,000ರೂಪಾಯಿ ನಗದು, ಪ್ರಮಾಣಪತ್ರ ಹಾಗೂ ಫಲಕ ಒಳಗೊಂಡಿದೆ ಎಂದು ತಿಳಿಸಿದರು.
ಅಲ್ಲದೆ ವಾರ್ಷಿಕ ಪ್ರಶಸ್ತಿಗೆ 30 ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಇವರು ತಲಾ 5,000ರೂಪಾಯಿ ನಗದು, ಪ್ರಮಾಣಪತ್ರ ಹಾಗೂ ಫಲಕ ಪಡೆಯಲಿದ್ದಾರೆ ಎಂದು ವಿವರಿಸಿದರು.
ವಾರ್ಷಿಕ
ಪ್ರಶಸ್ತಿಗೆ
ಆಯ್ಕೆಯಾದವರು
:
- ಎಸ್.ಪಾಪಣ್ಣ-ದೊಣ್ಣೆ ವರಸೆ, ಬೆಂಗಳೂರು ನಗರ ಜಿಲ್ಲೆ
- ಪಳನಿಸ್ವಾಮಿ-ಕಂಸಾಳೆ, ಬೆಂಗಳೂರು ನಗರ
- ಹಲಗೂಡಯ್ಯ- ನೀಲಗಾರರು, ಚಾಮರಾಜನಗರ
- ಗುಳ್ಳೆಪ್ಪ ಬಿನ್ ಎಲ್.ಕರಿಯಪ್ಪ-ಕೋಲಾಟ, ಕೋಲಾರ
- ಜಿ.ಶಿವಣ್ಣ-ವೀರಗಾಸೆ, ಚಿತ್ರದುರ್ಗ
- ಚಂದ್ರಮ್ಮ-ಹಾಡುಗಾರಿಕೆ, ಶಿವಮೊಗ್ಗ
- ಮುನಿಯಮ್ಮ-ಕಿಳ್ಳೆಕ್ಯಾತರ ಹಿಮ್ಮೇಳ, ಮೈಸೂರು
- ಪುಟ್ಟೇಗೌಡ-ಪೂಜಾ ಕುಣಿತ, ಮಂಡ್ಯ
- ಗೋಪಾಲಕೃಷ್ಣ ಶಾಸ್ತ್ರಿ-ಯಕ್ಷಗಾನ, ದಕ್ಷಿಣ ಕನ್ನಡ
- ಪಿ.ಗುರಪ್ಪ-ಸುಗ್ಗಿ ಕುಣಿತ, ಕೊಡಗು
- ವಂಡ್ಸೆ ನಾರಾಯಣ ಗಾಣಿಗ-ಯಕ್ಷಗಾನ ಉಡುಪಿ
- ಗಿರೆಪ್ಪ ರಾಮಪ್ಪ ಇರಗಿನಕೊಪ್ಪ-ಕರಡಿಮಜಲು, ಬೆಳಗಾವಿ
- ದೇವರಾಯ ಅಣ್ಣಪ್ಪ ಪೈ-ಯಕ್ಷಗಾನ, ಉತ್ತರ ಕನ್ನಡ
- ವೀರಪ್ಪ ಕುಂದಗೋಳ-ಬಯಲಾಟ, ಧಾರವಾಡ
- ಹನುಮಂತಪ್ಪ ಗೋವಿಂದಪ್ಪ ಹೂಗಾರ- ಸಂಪ್ರದಾನಿ ವಾದನ, ವಿಜಾಪುರ
- ಅಡಿವೆಪ್ಪ ಸಣ್ಣಬೀರಪ್ಪ ಕುರಿಯವರ-ಭಜನೆ/ತತ್ವಪದ, ಹಾವೇರಿ
- ಸಿದ್ಧಪ್ಪ ಶಿವಪ್ಪ ಭಜಂತ್ರಿ-ಮದ್ದಳೆ, ಗದಗ
- ಮುದುಕವ್ವ ಪೂಜಾರಿ-ಚೌಡಿಕೆ, ಬಾಗಲಕೋಟೆ
- ಶಿವಲಿಂಗಪ್ಪ ದಿಗ್ಗಿ-ಶೆಹನಾಯಿ, ಗುಲ್ಬರ್ಗಾ
- ಗುರುನಾಥ ಉಂಗಾರ ಶೆಟ್ಟಿ ಕೋಟೆ-ದೊಡ್ಡಾಟ, ಬೀದರ್
- ಎಂ.ಮರೆಪ್ಪ-ಹಗಲುವೇಷಗಾರರು, ರಾಯಚೂರು
- ಮಂಜಮ್ಮ ಜೋಗತಿ-ಜೋಗತಿಯಾಟ, ಬಳ್ಳಾರಿ
- ರೇಚಪ್ಪ ಮಡಿವಾಳ ಮಾಸ್ತರ-ದೊಡ್ಡಾಟ(ನಿರ್ದೇಶಕ), ಕೊಪ್ಪಳ
- ಅಸಡಿ ಕರಿಯಪ್ಪ-ಅಸಡಿ ಕಲೆ, ಚಿಕ್ಕಮಗಳೂರು
- ಲಕ್ಷ್ಮಯ್ಯ-ತಂಬೂರಿಪದ, ಹಾಸನ
- ಎನ್.ಕೆ.ಬೆಟ್ಟಪ್ಪ-ಮೂಡಲಪಾಯ ಭಾಗವತ, ತುಮಕೂರು
- ಎಂ.ಚೆನ್ನಬಸಪ್ಪ-ಗೊರವರ ಕುಣಿತ, ದಾವಣಗೆರೆ
- ಡಾ.ಪುರುಷೋತ್ತಮ ಬಿಳಿಮಲೆ-ಹೊರನಾಡು ಪ್ರಶಸ್ತಿ, ನವದೆಹಲಿ
- ಪಿ.ಶ್ರೀಧರ ಹಂದೆ-ಸಂಘಟನೆ, ಉಡುಪಿ
- ಎಚ್.ಎಸ್.ಬಂಗಾರು-ಕೀಲುಕುದುರೆ ಪರಿಕರ ನಿರ್ಮಾಣ, ಹಾಸನ
Story first published: Sunday, January 14, 2007, 5:30 [IST]