ಯಡಿಯೂರಪ್ಪ ರಾಜಕಾರಣ : ಶೋಭಾಗೆ ಮಂತ್ರಿಗಿರಿ?
ಬೆಂಗಳೂರು : ವಿಧಾನ ಪರಿಷತ್ತು ಸದಸ್ಯೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು, ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಸಕ್ತಿ ವಹಿಸಿದ್ದಾರೆ. ಈ ಸಂಗತಿ ಬಿಜೆಪಿಯಲ್ಲಿ ಭಿನ್ನಮತಕ್ಕೆ ದಾರಿ ಮಾಡಿದೆ.
ಬಿಜೆಪಿ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಯಿತು. ವಿರೋಧದ ನಡುವೆಯೇ ಶೋಭಾರನ್ನು ಸಂಪುಟಕ್ಕೆ ಸೇರಿಸಿಕೊಂಡರೆ, ತಮ್ಮಗಳ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಎಚ್ಚರಿಸಿದರು.
ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ನೆಪದಲ್ಲಿ ಶೋಭಾ ಅವರನ್ನು ಸಚಿವೆಯನ್ನಾಗಿಸಲು ಯಡಿಯೂರಪ್ಪ ಮುಂದಾಗಿದ್ದಾರೆ. ವೈಯುಕ್ತಿಕ ಹಿತಾಸಕ್ತಿಗಳು ಎಲ್ಲಿಯೂ ವಿಜೃಂಭಿಸಬಾರದು ಎಂದು ಬಿಜೆಪಿಯ ಒಂದು ಗುಂಪು ಅಭಿಪ್ರಾಯಪಟ್ಟಿದೆ.
ಸಂಕ್ರಾಂತಿ
ನಂತರ
ಸಂಪುಟ
ವಿಸ್ತರಣೆಯಾಗಲಿದ್ದು,
ಬಿಜೆಪಿ
ಪಕ್ಷದ
ಇಬ್ಬರು
ಶಾಸಕರು
ಸಂಪುಟ
ಪ್ರವೇಶಿಸುವ
ಸಾಧ್ಯತೆಗಳಿವೆ.
ಸಚಿವ
ಸ್ಥಾನಕ್ಕೆ
ಶಾಸಕರಾದ
ಪ್ರಕಾಶ್
ಖಂಡ್ರೆ,
ರಾಜೇಂದ್ರ
ವರ್ಮ,
ಎಸ್.
ಶಿವಣ್ಣ,
ಅಪ್ಪ
ಸಾಹೇಬ
ಪಟ್ಟಣಶೆಟ್ಟಿ
ಅವರ
ಹೆಸರುಗಳು
ಕೇಳಿಬರುತ್ತಿವೆ.
(ದಟ್ಸ್
ಕನ್ನಡ
ವಾರ್ತೆ)