ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಯೋಪಾರ್ಕ್ ಕಾಮಗಾರಿಗೆ ಮಾವೋವಾದಿಗಳ ಆಕ್ಷೇಪ
ಬೆಂಗಳೂರು : ನಗರದಲ್ಲಿನ ಕುವೆಂಪು ಸ್ಮಾರಕ ಬಯೋ ಪಾರ್ಕ್ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕೆಂದು ಭಾರತೀಯ ಕಮ್ಯೂನಿಸ್ಟ್ ಪಕ್ಷ(ಮಾವೋವಾದಿ) ಒತ್ತಾಯಿಸಿದೆ.
ಈ ಕುರಿತು ಪ್ರಕಟಣೆಯಾಂದರಲ್ಲಿ ಪಕ್ಷದ ರಾಜ್ಯ ಘಟಕದ ವಕ್ತಾರ ಗಂಗಾಧರ್, ಯೋಜನೆ ಪರಿಸರ ವಿರೋಧಿಯಾಗಿದ್ದು, ಅಸಂಖ್ಯ ರೈತರನ್ನು ಒಕ್ಕಲೆಬ್ಬಿಸಲಿದೆ. ಇದು ಕುವೆಂಪು ಅವರ ತತ್ವ ಹಾಗೂ ನಿಲುವುಗಳಿಗೆ ವಿರುದ್ಧವಾಗಿದೆ. ಯೋಜನೆ ಕೈಬಿಡದಿದ್ದರೆ ಉಗ್ರ ಪರಿಣಾಮ ಎದುರಿಸಬೇಕಾಗಾತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಯೋಜನೆಗೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಕಾಮಗಾರಿ ಭರದಿಂದ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, January 11, 2007, 5:30 [IST]