ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಾಮುಂಡಿ ಬೆಟ್ಟ : ಈ ಭಾಗದಲ್ಲಿ ಚಿಂಕೆ ಶಿಕಾರಿ ಉಂಟಾ?
ಮೈಸೂರು : ಚಾಮುಂಡಿ ಬೆಟ್ಟ ವ್ಯಾಪ್ತಿಯ ಅರಣ್ಯದಲ್ಲಿ ಜಿಂಕೆ ಶಿಕಾರಿಯ ಸಂಶಯ ಈಗ ದಟ್ಟವಾಗಿದೆ.
ಸಂಶಯ ಬಲಪಡಿಸುವಂತೆ, ಗಾಯಗೊಂಡು ಪರಿತ್ಯಕ್ತಗೊಂಡಿದ್ದ ಒಂದು ಕೃಷ್ಣಮೃಗ ಹಾಗೂ ಎರಡು ಜಿಂಕೆಗಳನ್ನು ಅರಣ್ಯಾಧಿಕಾರಿಗಳು ಬುಧವಾರ ರಕ್ಷಿಸಿದ್ದಾರೆ.
ಮಂಗಳವಾರ(ಜನವರಿ 09) ಇದೇ ಸ್ಥಳದಲ್ಲಿ ಐದು ಗಾಯಗೊಂಡ ಜಿಂಕೆಗಳು ಪತ್ತೆಯಾಗಿದ್ದವು. ಅಪರಿಚಿತ ವ್ಯಕ್ತಿಗಳು ಇವುಗಳನ್ನು ಬಿಟ್ಟುಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವನ್ಯಜೀವಿ ರಕ್ಷಣಾ ಕಾಯ್ದೆಗೆ ಹೆದರಿ, ಅನುಮತಿ ಇಲ್ಲದ ಮಾಲೀಕರು ಈ ಪ್ರಾಣಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಚಿಕಿತ್ಸೆಯ ನಂತರ ಪ್ರಾಣಿಗಳನ್ನು ಬಂಡೀಪುರ ಅರಣ್ಯದಲ್ಲಿ ಬಿಡಲಾಗುವುದು ಎಂದು ಮೂಲಗಳು ಹೇಳಿವೆ.
(ಯುಎನ್ಐ)
Comments
Story first published: Wednesday, January 10, 2007, 5:30 [IST]