ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುದುರೆಮುಖ ಗಣಿಗಾರಿಕೆ ಕಾರ್ಮಿಕರಿಗೊಂದು ಸಿಹಿಸುದ್ದಿ
ಬೆಂಗಳೂರು : ಗಣಿಕಾರಿಕೆ ಸ್ಥಗಿತದಿಂದ ಐಟಿ ಕ್ಷೇತ್ರಕ್ಕೆ ಕಾಲಿರಿಸಲು ಯೋಚಿಸಿದ್ದ ಕುದುರೆಮುಖ ಕಂಪೆನಿಗೆ ಈಗ ಶುಭಕಾಲ. ಗಣಿ ಸಂಸ್ಥೆಗೆ ಸೇರಿದ ಕಾರ್ಮಿಕ ಸಂಘ, ರಾಜ್ಯ ಸರ್ಕಾರದ ವಿರುದ್ಧ ಪ್ರಕರಣ ಗೆದ್ದಿದೆ!
ಕಬ್ಬಿಣದ ಅದಿರು ದಾಸ್ತಾನಿನ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಹೂಡಿದ್ದ ಮೊಕದ್ದಮೆಯನ್ನು, ಕುದುರೆಮುಖ ಶ್ರಮ ಶಕ್ತಿ ಸಂಘಟನೆ ಗೆದ್ದಿದೆ. ಈ ಪರಿಣಾಮ ಈಗ ಕುದುರೆಮುಖದಿಂದ ಬಳ್ಳಾರಿಯ ರಾಮದುರ್ಗ ಗಣಿಯತ್ತ ಸಂಸ್ಥೆ ತಿರುಗಿದೆ.
ರಾಮದುರ್ಗದ ಸುಮಾರು 1,573 ಹೆಕ್ಟೇರು ಗಣಿ ಪ್ರದೇಶ, ಈಗ ಕುದುರೆಮುಖ ಸಂಸ್ಥೆಗೆ ಲಭ್ಯವಾಗಲಿದೆ. ಬಳ್ಳಾರಿ ಸೇರಿದಂತೆ ಮಂಗಳೂರು ಹಾಗೂ ಒರಿಸ್ಸಾದಲ್ಲೂ ಕಂಪೆನಿ ತನ್ನ ವಹಿವಾಟನ್ನು ವಿಸ್ತರಿಸುವ ಬಗ್ಗೆ ಚಿಂತಿಸಿದೆ ಎಂದು ಕುದುರೆ ಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ. ಗಣೇಶನ್ ಹೇಳಿದ್ದಾರೆ.
(ಏಜನ್ಸೀಸ್)
Story first published: Tuesday, January 9, 2007, 5:30 [IST]