ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾವನ ಬಳಿ ಹಣ ಕೇಳೋದು ತಪ್ಪಲ್ಲ: ಸುಪ್ರೀಂ ಕೋರ್ಟ್‌

By Staff
|
Google Oneindia Kannada News

ನವದೆಹಲಿ : ಯಾವುದು ವರದಕ್ಷಿಣೆ? ಯಾವುದು ವರದಕ್ಷಿಣೆಯಲ್ಲ ಎಂಬ ಬಗ್ಗೆ ಸುಪ್ರೀಂಕೋರ್ಟ್‌ ಸ್ಪಷ್ಟನೆ ನೀಡಿದೆ.

ಆರ್ಥಿಕ ಸಂಕಷ್ಟ, ಮನೆಯ ನಿರ್ವಹಣೆ, ಗೊಬ್ಬರ ಖರೀದಿ ಮತ್ತಿತರ ವಿಚಾರಗಳಲ್ಲಿ ಮಾವನ ಮನೆಯಿಂದ ಅಳಿಯ, ಹಣ ಪಡೆಯಬಹುದು. ಇದನ್ನು ವರದಕ್ಷಿಣೆ ಎಂದು ಹೇಳುವಂತಿಲ್ಲ. ಹೀಗಾಗಿ ಇದು ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಹಿನ್ನೆಲೆ : ವರದಕ್ಷಿಣೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಗೆ ಶಿಕ್ಷೆ ವಿಧಿಸಿದ್ದ ಮುಂಬೈ ಕೋರ್ಟ್‌ನ ತೀರ್ಪನ್ನು ಸುಪ್ರೀಂಕೋರ್ಟ್‌ ತಳ್ಳಿ ಹಾಕಿದೆ. ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ, ಜಿ.ಪಿ.ಮಾಥೂರ್‌ ಮತ್ತು ಆರ್‌.ವಿ.ರವೀಂದ್ರನ್‌ ಪೀಠ, ವರದಕ್ಷಿಣೆಗೆ ವ್ಯಾಖ್ಯಾನ ನೀಡುವಂತಹ ಮಹತ್ವದ ತೀರ್ಪೋಂದನ್ನು ನೀಡಿದೆ.

ಈ ತೀರ್ಪಿನಿಂದ ಸಮಾಜದಲ್ಲಿ ಅಡ್ಡಪರಿಣಾಮಗಳು ಉಂಟಾಗಬಹುದೆ? ಓದುಗರು ತಮ್ಮ ಅನಿಸಿಕೆ ಬರೆಯಬಹುದು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X