ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರಾವಳಿಯಲ್ಲಿ ನಕ್ಸಲ್ ಜೊತೆ ಭಯೋತ್ಪಾದಕರ ನಂಟು!
ಚಿಕ್ಕಮಗಳೂರು : ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉಗ್ರಗಾಮಿಗಳ ಚಟುವಟಿಕೆಗಳು ಗುಪ್ತವಾಗಿ ನಡೆದಿವೆ. ನಕ್ಸಲರು ಇವರುಗಳೊಂದಿಗೆ ಕೈಜೋಡಿಸಿದ್ದಾರೆ ಎನ್ನಲಾಗಿದೆ.
2006ರ ಜೂನ್ನಲ್ಲಿ ಗುಪ್ತಚರ ಇಲಾಖೆ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಪೊಲೀಸರು ಕಟ್ಟೆಚ್ಚರವಹಿಸಿದ್ದು, ಉಗ್ರರ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯುವಲ್ಲಿ ಶ್ರಮಿಸುತ್ತಿದ್ದಾರೆ.
ಅಲ್ ಖೈದಾ, ಲಷ್ಕರ್-ಇ-ತೊಯಿಬಾ ಸೇರಿದಂತೆ ವಿವಿಧ ಉಗ್ರಗಾಮಿ ಸಂಘಟನೆಗಳು ಈ ಭಾಗದಲ್ಲಿ ತಮ್ಮ ಜಾಲ ಹರಡಿವೆ. ಈ ಜಿಲ್ಲೆಗಳಲ್ಲಿ ಉಗ್ರರ ಶಸ್ತ್ರಾಸ್ತ್ರ ಬಳಕೆಯ ತರಬೇತಿ ನಡೆಯುತ್ತಿರಬಹುದೆಂಬ ಸಂಶಯವೂ ವ್ಯಕ್ತವಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, January 6, 2007, 5:30 [IST]