ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾನು ತಪ್ಪು ಮಾಡಿರುವೆ.. : ಪೇಜಾವರ ಶ್ರೀಗಳ ಅನಿಸಿಕೆ!
ಉಡುಪಿ : ಶ್ರದ್ಧಾ ಭಕ್ತಿಗಳಿಂದ ಮಠಕ್ಕಾಗಿ ಭಕ್ತರು ನೀಡಿದ ಹಣವನ್ನು, ಅಪವ್ಯಯ ಮಾಡಿದ ತಮ್ಮ ಕೃತ್ಯಕ್ಕೆ ಪೇಜಾವರ ಮಠದ ವಿಶ್ವೇಶತೀರ್ಥರು ದೇವರಲ್ಲಿ ಕ್ಷಮೆಯಾಚಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮಠದ ಭಕ್ತರು ಪಾದಕಾಣಿಕೆ ರೂಪದಲ್ಲಿ ನೀಡಿದ 12ಲಕ್ಷ ರೂ.ಗಳನ್ನು ಶಿಷ್ಯರೊಬ್ಬರ ವಿನಂತಿ ಮೇರೆಗೆ, ವೆಂಕಟೇಶ್ ಎಂಬುವವರಿಗೆ ಸಾಲದ ರೂಪದಲ್ಲಿ ನೀಡಲಾಯಿತು. ಆದರೆ ಅವರು ವಂಚನೆ ಮಾಡಿದರು. ಈ ಮೂಲಕ ನನ್ನಿಂದ ಸಾರ್ವಜನಿಕ ಹಣ ಅಪವ್ಯಯವಾಗಿದೆ ಎಂದರು.
ಉಪವಾಸ ಮತ್ತು ದೇವರಲ್ಲಿ ಕ್ಷಮೆಯಾಚಿಸುವ ಮೂಲಕ, ಮಾಡಿದ ಪಾಪವನ್ನು ತೊಳೆದುಕೊಳ್ಳುತ್ತೇನೆ ಎಂದು ಶ್ರೀಗಳು, ತಮ್ಮ ವಿರುದ್ಧದ ಕೊಲೆ ಮತ್ತು ಬೆದರಿಕೆ ಆರೋಪವನ್ನು ತಳ್ಳಿ ಹಾಕಿದರು. ಅಂತಹ ಸಂಸ್ಕೃತಿ ನಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಪೇಜಾವರ
ಸ್ವಾಮೀಜಿಯಿಂದ
ಕೊಲೆ
ಬೆದರಿಕೆ
:
ಆರೋಪ
Story first published: Saturday, January 6, 2007, 5:30 [IST]