ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೊಸ ಸೈಬರ್ ಲ್ಯಾಬ್ನಿಂದ ಅಪರಾಧಗಳಿಗೆ ಕಡಿವಾಣ!
ಬೆಂಗಳೂರು : ಸೈಬರ್ ಜಗತ್ತಿನಲ್ಲಿ ಇತ್ತೀಚಿನ ದಿನಗಳಲ್ಲಿ ಪಾತಕಗಳು ಹೆಚ್ಚುತ್ತಿವೆ. ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ನಗರದಲ್ಲೊಂದು ಸೈಬರ್ ಲ್ಯಾಬ್ ಆರಂಭಗೊಂಡಿದೆ.
ಸಿಓಡಿ ಕೇಂದ್ರದಲ್ಲಿ ಆರಂಭಗೊಂಡ ಈ ಸೈಬರ್ ಕೇಂದ್ರ, ದಕ್ಷಿಣ ಭಾರತದಲ್ಲಿ ಬೆಂಗಳೂರು ಹೊರತುಪಡಿಸಿ ದಕ್ಷಿಣ ಭಾರತದಲ್ಲಿ ಬೇರೆಲ್ಲೂ ಇಲ್ಲ. ಇದು ಭಾರತದ ಮೂರನೇ ಸೈಬರ್ ಪ್ರಯೋಗಾಲಯ.
ಪ್ರಯೋಜನಗಳು
:
- ಸೈಬರ್ ಲ್ಯಾಬ್ನಿಂದ ಪ್ರತಿವರ್ಷ ಸಾವಿರಾರು ಜನರಿಗೆ ಉದ್ಯೋಗ. ಆಸಕ್ತರಿಗೆ 10ದಿನಗಳ ತರಬೇತಿ ಇಲ್ಲಿ ಲಭ್ಯ.
- ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಅನುಕೂಲ.
- ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯಲ್ಲಿನ ಲೋಪಗಳು ಹಾಗೂ ಅದರ ನಿವಾರಣೆಗೆ ಬೇಕಾದ ಮಾಹಿತಿಯನ್ನು ಲ್ಯಾಬ್ನಿಂದ ಪಡೆಯಬಹುದು.
- ಎಟಿಎಂ ಸೇವೆ, ಇ-ಬುಕ್ಕಿಂಗ್ನಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದೆ. ಈ ಇಟ್ಟಿನಲ್ಲಿ ಸೈಬರ್ ಲ್ಯಾಬ್ನ ಮಹತ್ವ ಹಿರಿದು.
Comments
Story first published: Thursday, January 4, 2007, 5:30 [IST]