ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಾಲ್‌ ಸೆಂಟರ್‌ ಪ್ರತಿಭಾಳನ್ನು ನಾನಂತೂ ಕೊಂದಿಲ್ಲ...’

By Staff
|
Google Oneindia Kannada News

Supervisor killed Prathiba, says accused Shivakumarಬೆಂಗಳೂರು : ಕಾಲ್‌ ಸೆಂಟರ್‌ ಹುಡುಗಿ ಪ್ರತಿಭಾ ಕೊಲೆ ಪ್ರಕರಣ ಹೊಸ ತಿರುವು ಪಡೆದಿದೆ. ಪ್ರತಿಭಾರನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದ ಆರೋಪಿ ಶಿವಕುಮಾರ್‌ ಈಗ, ತನ್ನ ಹೇಳಿಕೆ ಬದಲಿಸಿದ್ದಾನೆ.

ಪ್ರತಿಭಾ ಕೊಲೆ ಮಾಡಿದ್ದು ನಾನಲ್ಲ. ಎಸ್‌ಆರ್‌ಎಸ್‌ ಟ್ರಾವೆಲ್ಸ್‌ನ ಸೂಪರ್‌ವೈಸರ್‌ ಗಿರೀಶ್‌ ಬಾಬು. ಪೊಲೀಸರ ಕಿರುಕುಳಕ್ಕೆ ಮಣಿದು, ಆ ಕೊಲೆಯನ್ನು ನನ್ನ ಮೇಲೆ ಎಳೆದುಕೊಂಡೆ ಎಂದು ಶಿವಕುಮಾರ್‌ ಸುದ್ದಿಗಾರರಿಗೆ ತಿಳಿಸಿದ್ದಾನೆ.

ಬಲವಂತದಿಂದ ನನ್ನ ವೀರ್ಯವನ್ನು, ಪ್ರತಿಭಾ ಧರಿಸಿದ್ದ ಬಟ್ಟೆ ಮೇಲೆ ಹಾಕಿಸಿದರು. ಈ ಪ್ರಕರಣದಲ್ಲಿ ನಾನು ಬಲಿಪಶು. ಗಿರೀಶ್‌ ಬಾಬು ಬೆದರಿಕೆಗೆ ಹೆದರಿ, ಸತ್ಯವನ್ನು ಮುಚ್ಚಿಟ್ಟಿದ್ದೆ. 2006ರ ಮಾರ್ಚ್‌ 28ರಲ್ಲಿ ಸುಳ್ಳು ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್‌ ಎದುರು ಒಪ್ಪಿಸುವುದು ಅನಿವಾರ್ಯವಾಯಿತು ಎಂದು ಹೇಳಿದ್ದಾನೆ.

2005ರ ಡಿಸೆಂಬರ್‌ 13ರಂದು ಬನ್ನೇರುಘಟ್ಟದ ಎಚ್‌ಪಿಯ ಕಾಲ್‌ಸೆಂಟರ್‌ನ ಉದ್ಯೋಗಿ ಪ್ರತಿಭಾ, ರಾತ್ರಿ ಪಾಳಿಯ ಕೆಲಸಕ್ಕೆ ಮನೆಯಿಂದ ತೆರಳುವಾಗ ಅತ್ಯಾಚಾರಕ್ಕೆ ಬಲಿಯಾಗಿದ್ದಳು. ಡಿ.16ರಂದು ಕನಕಪುರ ರಸ್ತೆಯಲ್ಲಿ ಶವ ಪತ್ತೆಯಾಗಿತ್ತು.

ವಿಚಾರಣೆ ಆರಂಭ : ಒಂದು ವರ್ಷದ ಹಿಂದೆ ನಡೆದ ಪ್ರತಿಭಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆಯನ್ನು, ನಗರದ ಏಳನೇ ನ್ಯಾಯಾಲಯ ಮಂಗಳವಾರದಿಂದ ಆರಂಭಿಸಿದೆ. ಜ.12ರವರೆಗೆ ವಿಚಾರಣೆ ಮುಂದುವರೆಯಲಿದೆ. ನ್ಯಾಯಮೂರ್ತಿ ಸುಕನ್ಯಾ ವಿಚಾರಣೆಯಲ್ಲಿ, ಕೆಲವು ಮಹತ್ವದ ಅಂಶಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X