ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹಿಂದೂಗಳಿಂದ ಪರಿಸರ ರಕ್ಷಣೆ, ಉಗ್ರರಿಗೆ ಕಡಿವಾಣ..’

By Staff
|
Google Oneindia Kannada News

ಬೆಂಗಳೂರು : ಭಯೋತ್ಪಾದನೆ ಮತ್ತು ಪರಿಸರ ಸಂಬಂಧಿ ಸಮಸ್ಯೆಗಳು ಪ್ರಪಂಚವನ್ನು ಕಾಡುತ್ತಿವೆ. ಈ ಸಮಸ್ಯೆಗಳಿಗೆ ಹಿಂದೂ ಧರ್ಮದಿಂದ ಪರಿಹಾರ ಸಾಧ್ಯವಿದೆ ಎಂದು ಗುಜರಾಜ್‌ ಮುಖ್ಯಮಂತ್ರಿ ಮತ್ತು ಬಿಜೆಪಿಯ ಫೈರ್‌ ಬ್ರಾಂಡ್‌ ನಾಯಕ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ನಿತ್ಯಾನಂದ ಧ್ಯಾನ ಪೀಠದ ಉದ್ಘಾಟನೆ ನೆರವೇರಿಸಿದ ಅವರು, ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಧರ್ಮಗಳಲ್ಲಿನ ದೋಷಗಳೇ ಕಾರಣ. ವಿಶಾಲ ಮನೋಭಾವನೆ, ಸ್ವೀಕಾರ ಮನಸ್ಥಿತಿ, ಪ್ರೀತಿ-ವಾತ್ಸಲ್ಯ ಇವೆಲ್ಲವೂ ಹಿಂದೂ ಧರ್ಮದ ಆಧಾರ ಸ್ತಂಭಗಳು. ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಲು ಹಿಂದೂ ಧರ್ಮ ಸಮರ್ಥವಾಗಿದೆ ಎಂದರು.

ಗಿಡಮರಗಳನ್ನು ಹಿಂದೂ ಧರ್ಮದಲ್ಲಿ ದೇವರೆಂದು ಗುರ್ತಿಸಲಾಗಿದೆ. ಹೀಗಾಗಿ ಗಿಡ ಮರಗಳ ಬಗ್ಗೆ ದೈವಿಕ ಭಾವನೆ ಹಿಂದೂಗಳಲ್ಲಿದೆ. ವರ್ಷಕ್ಕೆ ಒಂದು ದಿನ ವಿಶ್ವ ಭೂಮಿ ದಿನವನ್ನು ಆಚರಿಸುತ್ತದೆ. ಆದರೆ ಹಿಂದೂಗಳು ಪ್ರತಿ ದಿನ ಪ್ರಕೃತಿಗೆ ವಂದಿಸುತ್ತಾರೆ ಎಂದು ನರೇಂದ್ರ ಮೋದಿ ಹೇಳಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X