ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗದಗದಲ್ಲಿ ನೂತನ ವರ್ಷ-ಹರ್ಷ : ಪ್ರಾಣೇಶ್ಗೆ ಸನ್ಮಾನ
ಬೆಂಗಳೂರು : ಗದಗದ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ, ಡಿ.31ರಂದು ಸಂಜೆ 6.30ಗಂಟೆಗೆ ‘ನೂತನ ವರ್ಷ-ಹರ್ಷ’ ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಗದುಗಿನ ಶ್ರೀ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಭಿನವ ಬೀಚಿ ಬಿ.ಪ್ರಾಣೇಶ್ ಅವರಿಗೆ ‘ನಗೆಚೇತನ’ ಪ್ರಶಸ್ತಿ ನೀಡಲಾಗುತ್ತದೆ. ಹಾಸ್ಯ ಸಾಹಿತಿ ಎಂ.ಡಿ.ಗೋಗೇರಿ ಪ್ರಶಸ್ತಿ ಪ್ರದಾನ ಮಾಡುವರು.
ನಂತರ ಪ್ರಾಣೇಶ್ ಮತ್ತು ಕೊಗಳ್ಳಿ ಕೊಟ್ರೆಶ್ ಕೂಡ್ಲಿಗಿ ಅವರಿಂದ ‘ನಗೆನವಿಲು’ ಎಂಬ ವಿಶೇಷ ರಂಜನೆ. ಕಾರ್ಯಕ್ರಮದಲ್ಲಿ ಪ್ರೊ.ಚಂದ್ರಶೇಖರ ವಸ್ತ್ರದ, ಕಾವೆಂಶ್ರೀ, ಕೆ.ಎಸ್. ಜಯದೇವಭಟ್ಟ, ವಿಶ್ವನಾಥ ತೋ.ನಾಲವಾಡದ, ಕೆ.ಎಸ್.ಅನಂತಮೋಹನಭಟ್ಟ, ಶಾಂತವೀರ ಜಂಗಮನಿ ಮತ್ತಿತರರು ಪಾಲ್ಗೊಳ್ಳುವರು.
‘ಖಚಿತ ನಗೆಗೆ -ಉಚಿತ ಪ್ರವೇಶ’ ಎನ್ನುವುದು ಕಾರ್ಯಕ್ರಮ ಸಂಘಟಕರ ಘೋಷ ವಾಕ್ಯ. ಜೊತೆಗೆ ಪ್ರೀತಿಯ ಆಹ್ವಾನ.
(ದಟ್ಸ್ ಕನ್ನಡ ವಾರ್ತೆ)
Story first published: Thursday, December 28, 2006, 23:53 [IST]