ದೋಸ್ತಿ : ದೇವೇಗೌಡರಿಗೆ ವೆಂಕಯ್ಯನಾಯ್ಡು ತಿರುಗೇಟು
ಬೆಂಗಳೂರು : ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಜೆಡಿಎಸ್ ಬದ್ಧವಾದರೆ, ಬಿಜೆಪಿ ಕೂಡ ಬದ್ಧವಾಗಲಿದೆ ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಿ ದೇವೇಗೌಡರ ಮಾತಿಗೆ ಎದಿರೇಟು ನೀಡಿದ್ದಾರೆ.
ಪ್ರೆಸ್ ಕ್ಲಬ್ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಳೆದೆರಡು ದಿನಗಳ ಹಿಂದೆ ಜೆಡಿಎಸ್ ಮಹಾನಾಯಕ ದೇವೇಗೌಡ, ಬಿಜೆಪಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಬದ್ಧವಾದರೆ ಮಾತ್ರ, ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಾಗುವುದು ಎಂದು ಹೇಳಿದ್ದಕ್ಕೆ ಅವರು ಹೀಗೆ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಜಾತ್ಯತೀತ ಜನತಾದಳದೊಂದಿಗಿನ ಮೈತ್ರಿ ತಾತ್ಕಾಲಿಕವಾದುದು. ರಾಜ್ಯದ ಸಮ್ಮಿಶ್ರ ಸರ್ಕಾರ ಸಫಲವಾಗಬೇಕು ಎಂಬುದೇ ಬಿಜೆಪಿ ನಿಲುವು. ಜೆಡಿಎಸ್, ಎನ್ಡಿಎ ಸೇರುವುದು ಆ ಪಕ್ಷದ ವರಿಷ್ಠರಿಗೆ ಸೇರಿದ ವಿಚಾರ. ಮೊದಲು ಜೆಡಿಎಸ್ ಗೊಂದಲದಿಂದ ಹೊರಬರಲಿ. ಆ ನಂತರವಷ್ಟೇ ಎನ್ಡಿಎನಲ್ಲಿ ಸೇರಿಸಿಕೊಳ್ಳುವ ವಿಚಾರ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)