ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗಶಂಕರದಲ್ಲಿ ಡಿ.30,31ರಂದು ಬಿ.ಜಯಶ್ರೀ ನಾಟಕ

By Staff
|
Google Oneindia Kannada News

B. Jayashri as Draupadi in Uriya Uyyale of H.S. Venkatesh Murthyಬೆಂಗಳೂರು : ಹಿರಿಯ ರಂಗಕಲಾವಿದೆ ಬಿ.ಜಯಶ್ರೀ ಅಭಿನಯದಲ್ಲಿ, ಡಿಸೆಂಬರ್‌ 30 ಹಾಗೂ 31ರಂದು ರಂಗಶಂಕರದಲ್ಲಿ ‘ಉರಿಯ ಉಯ್ಯಾಲೆ’ ಎಂಬ ಏಕವ್ಯಕ್ತಿ ರಂಗಪ್ರದರ್ಶನ ನಡೆಯಲಿದೆ.

ಕವಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಬರೆದಿರುವ ಈ ನಾಟಕ, ಸುರೇಂದ್ರನಾಥ್‌ ನಿರ್ದೇಶನದಲ್ಲಿ ಮೂಡಿ ಬರಲಿದೆ. ಪದ್ಮಶ್ರೀ ಜೋಸಾಲ್ಕರ್‌ ವಸ್ತ್ರ ವಿನ್ಯಾಸ, ರಾಮಕೃಷ್ಣ ಕನ್ನರಪಾಡಿ ಪ್ರಸಾಧನ, ಎಂ.ಎಸ್‌.ಸತ್ಯು ರಂಗಸಜ್ಜಿಕೆ ಹಾಗೂ ಕೆ.ಆನಂದರಾಜು ಬೆಳಕು ನಿರ್ವಹಣೆ ಮಾಡಲಿದ್ದಾರೆ.

ಸಂಜೆ ಸರಿಯಾಗಿ 7.30 ಗಂಟೆಗೆ ಆರಂಭವಾಗುವ ಪ್ರದರ್ಶನಕ್ಕೆ ಅಭಿಮಾನಿಗಳು ಬರಬೇಕೆಂದು ಆತ್ಮೀಯವಾಗಿ ಕೋರಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X