ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜಶೇಖರಮೂರ್ತಿ ಕೂಡ ಕಾಂಗ್ರೆಸ್ನತ್ತ : ವಿಶ್ವನಾಥ್
ಮೈಸೂರು : ಜೆಡಿಎಸ್ನ ಹಿರಿಯ ನಾಯಕ ಹಾಗೂ ಸಂಸದ ಎಂ.ರಾಜಶೇಖರಮೂರ್ತಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.
ಭಾನುವಾರ ನಡೆದ ಕಾಂಗ್ರೆಸ್ನ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ, ಜಾತ್ಯತೀತ ಜನತಾದಳ ನಾಯಕರು ರಾಜಶೇಖರಮೂರ್ತಿ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಸಿದ್ಧತೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕಾಂಗ್ರೆಸ್ಗೆ ಕರೆತರಲು ವೇದಿಕೆ ಸಿದ್ಧಗೊಂಡಿದೆ ಎಂದು ಘೋಷಿಸಿದರು.
ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ್ಪ್ರಸಾದ್ ಈಗಾಗಲೇ ಕಾಂಗ್ರೆಸ್ಗೆ ಸೇರಿದ್ದಾರೆ. ರಾಜಶೇಖರಮೂರ್ತಿ ಆಗಮನದೊಂದಿಗೆ ತ್ರಿವಳಿಗಳು ಒಂದೆಡೆ ಸೇರಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಕೂಡ ರಾಜಶೇಖರಮೂರ್ತಿ ಕಾಂಗ್ರೆಸ್ ಸೇರುವ ಕುರಿತು ಮುನ್ಸೂಚನೆ ನೀಡಿದರು.
(ಏಜನ್ಸೀಸ್)
Comments
Story first published: Monday, December 25, 2006, 23:53 [IST]