ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಸಿಎಂ ಮತ್ತು 38ಶಾಸಕರ ಅಮಾನತು ತೆರವು

By Staff
|
Google Oneindia Kannada News

ನವದೆಹಲಿ : ನಿರೀಕ್ಷೆಯಂತೆಯೇ, ಕರ್ನಾಟಕದ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಸೇರಿದಂತೆ 38ಶಾಸಕರ ಅಮಾನತನ್ನು ಜೆಡಿಎಸ್‌ ಸೋಮವಾರ ತೆರವುಗೊಳಿಸಿದೆ.

ಪಕ್ಷದ ರಾಷ್ಟ್ರೀಯ ಕಾರ್ಯಾಕಾರಣಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಬಿಜೆಪಿ ಜೊತೆ ಕೈಸೇರಿಸಿದ್ದಕ್ಕಾಗಿ, ಕುಮಾರಸ್ವಾಮಿ ಮತ್ತಿತರ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಇದೆಲ್ಲವೂ ಅಪ್ಪ-ಮಕ್ಕಳ ನಾಟಕ, ಕೆಲವೇ ದಿನಗಳಲ್ಲಿ ಅಮಾನತು ಆದೇಶ ರದ್ದಾಗಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಅದೀಗ ನಿಜವಾಗಿದೆ.

ಇಂದು ನಡೆದ ಜೆಡಿಎಸ್‌ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ, ಪಕ್ಷದ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡರ ವಿರುದ್ಧ ಬಂಡೆದ್ದಿದ್ದ ಸುರೇಂದ್ರ ಮೋಹನ್‌ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಯಿತು. ಒಂದು ವಾರದ ಹಿಂದೆ ಅಮಾನತ್ತಿಗೆ ಒಳಗಾಗಿದ್ದ ಸಂಸದ ವೀರೇಂದ್ರ ಕುಮಾರ್‌ ಅವರ ಜೊತೆ ಸುರೇಂದ್ರ ಕುಮಾರ್‌ ಗುರ್ತಿಸಿಕೊಂಡಿದ್ದರು.

ರಾಷ್ಟ್ರ ಮಟ್ಟದಲ್ಲಿ ಜೆಡಿಎಸ್‌ ಮತ್ತೆ ಎರಡು ಕವಲಾಗಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X