ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲೈಂಗಿಕ ಕಿರುಕುಳ : ಪಾದ್ರಿ ಮ್ಯಾಥ್ಯೂ ಪೊಲೀಸರಿಗೆ ಶರಣು
ಬೆಂಗಳೂರು : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ, ಜಾಲಹಳ್ಳಿ ಸೇಂಟ್ ಕ್ಲಾರೆಟ್ ಶಾಲೆ ಪ್ರಾಂಶುಪಾಲ ಫಾದರ್ ಮ್ಯಾಥ್ಯೂ ಪೊಲೀಸರಿಗೆ ಶರಣಾಗಿದ್ದಾನೆ.
ವಕೀಲರೊಂದಿಗೆ ಆಗಮಿಸಿದ ಮ್ಯಾಥ್ಯೂ, ಬುಧವಾರ ರಾತ್ರಿ ಜಯಚಾಮರಾಜೇಂದ್ರನಗರ ಪೊಲೀಸರೆದುರು ಶರಣಾಗಿ, ಆನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
ಪ್ರಕರಣದ ತನಿಖೆ ನಡೆಸುತ್ತಿರುವ ಡಿಸಿಪಿ(ಉತ್ತರ ವಲಯ) ಮಾಲಿನಿ ಕೃಷ್ಣಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಾಮೀನು ನೀಡಲು ಅವಕಾಶವಿಲ್ಲದಿದ್ದರೂ ಮ್ಯಾಥ್ಯೂ ಪರ ವಕೀಲರು ಸಾಕಷ್ಟು ಮಾಹಿತಿ ನೀಡಿದ್ದರಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಮ್ಯಾಥ್ಯೂ ತನಿಖೆ ಸಂದರ್ಭದಲ್ಲಿ ಯಾವಾಗ ಕರೆದರೂ ಹಾಜರಾಗಬೇಕಾಗುತ್ತದೆ ಎಂದು ತಿಳಿಸಿದರು.
ಘಟನೆ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲ ಸ್ಥಾನಕ್ಕೆ ಉಪಪ್ರಾಂಶುಪಾಲ ಆನಂದ್ರಾಜ್ ಅವರನ್ನು ನೇಮಕ ಮಾಡಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, December 21, 2006, 23:53 [IST]