ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಸ್ಸಿಕಾಲಾಲ್‌ ಹಂತಕನಿಗೆ ಕೊನೆಗೂ ಜೀವಾವಧಿ ಶಿಕ್ಷೆ!

By Staff
|
Google Oneindia Kannada News

ನವದೆಹಲಿ : ದೆಹಲಿ ಹೈಕೋರ್ಟ್‌ ಬುಧವಾರ ಮಹತ್ವದ ತೀರ್ಪು ಪ್ರಕಟಿಸಿದೆ. ರೂಪದರ್ಶಿ ಜೆಸ್ಸಿಕಾಲಾಲ್‌ ಕೊಲೆ ಪ್ರಕರಣದಲ್ಲಿ, ಆರೋಪಿ ಮನು ಶರ್ಮಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಹರಿಯಾಣದ ಕಾಂಗ್ರೆಸ್‌ ನಾಯಕ ವಿನೋದ್‌ ಶರ್ಮ ಪುತ್ರ ಮನು ಶರ್ಮ, 1999ರ ಏಪ್ರಿಲ್‌ 29ರಂದು ಜೆಸ್ಸಿಕಾಳ ಹತ್ಯೆ ಮಾಡಿದ್ದ. ದೆಹಲಿಯ ರೆಸ್ಟೋರೆಂಟ್‌ನಲ್ಲಿ ನಡೆದ ಈ ಕೊಲೆ, ರಾಷ್ಟ್ರದ ಗಮನ ಸೆಳೆದಿತ್ತು.

ಏಳು ವರ್ಷಗಳ ನಂತರ ಪ್ರಕರಣದ ಪ್ರಮುಖ ಆರೋಪಿ ಮನು ಶರ್ಮಗೆ ಶಿಕ್ಷೆಯಾಗಿದೆ. ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಆರ್‌.ಎಸ್‌. ಸೋಧಿ ಮತ್ತು ಪಿ.ಕೆ.ಭಾಸಿನ್‌ರನ್ನೊಳಗೊಂಡ ನ್ಯಾಯಪೀಠ, ಶಿಕ್ಷೆ ಜೊತೆಗೆ ಜೆಸ್ಸಿಕಾ ಕುಟುಂಬಕ್ಕೆ 50ಸಾವಿರ ಪರಿಹಾರ ಧನ ನೀಡುವಂತೆ ಆದೇಶಿಸಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X