ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್‌ ಕಲಾಂ

By Staff
|
Google Oneindia Kannada News

ಬೆಂಗಳೂರು : ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್‌ ಕಲಾಂ ಭಾನುವಾರ ಸಂಜೆ ನಗರಕ್ಕೆ ಆಗಮಿಸಿದ್ದು, ಸೋಮವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

‘ಶ್ರೀ ಆದಿಗುರು ಶಿವರಾತ್ರೀಶ್ವರರ 1047ನೇ ಜನ್ಮದಿನೋತ್ಸವ ಆಚರಣೆ’ ಉದ್ಘಾಟಿಸುವ ಮೂಲಕ ತಮ್ಮ ಕಾರ್ಯಕ್ರಮ ಆರಂಭಿಸುವರು. ಈ ಉತ್ಸವ ಬಸವೇಶ್ವರನಗರದ ಗಂಗಮ್ಮ ತಿಮ್ಮಯ್ಯ ಸಭಾಂಗಣದಲ್ಲಿ ಆರುದಿನಗಳ ಕಾಲ ನಡೆಯಲಿದೆ.

ಆನಂತರ ಭಾರತೀಯ ವಿಜ್ಞಾನ ಮಂದಿರದಲ್ಲಿ ‘ಟ್ರೆಂಡ್ಸ್‌ ಇನ್‌ ಪ್ರಾಡಕ್ಟ್‌ ಲೈಫ್‌ ಸೈಕಲ್‌, ಮಾಡಲಿಂಗ್‌, ಸಿಮುಲೇಷನ್‌ ಆ್ಯಂಡ್‌ ಸಿಂಥೆಸಿಸ್‌-2006’ ಎಂಬ ಅಂತರಾಷ್ಟ್ರೀಯ ಸಮಾವೇಶ ಉದ್ಘಾಟಿಸುವರು.

ಇದಾದಮೇಲೆ ನಾರಾಯಣ ಹೃದಯಾಲಯದ ‘ಥ್ರೊಂಬೋಸಿಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌’ನ್ನು ಸೇವೆಗೆ ಮುಕ್ತಗೊಳಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಅವರು ದೆಹಲಿಗೆ ವಾಪಸಾಗಲಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X