ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಖ್ಯಮಂತ್ರಿ ಕುಮಾರಣ್ಣನಿಗೀಗ 48 : ಒಂದು ನೋಟ
ಬೆಂಗಳೂರು : ಇಂದು (ಡಿ.16) ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 48ನೇ ಹುಟ್ಟುಹಬ್ಬ. ಅವರ ಅಭಿಮಾನಿಗಳು ಸಡಗರ-ಸಂಭ್ರಮದಿಂದ ಹುಟ್ಟುಹಬ್ಬವನ್ನು ರಾಜಧಾನಿ ಸೇರಿದಂತೆ ರಾಜ್ಯದ ವಿವಿಧೆಡೆ ಆಚರಿಸುತ್ತಿದ್ದಾರೆ.
ದಿಢೀರ್ ರಾಜ್ಯದ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರ, ಈವರೆಗಿನ ರಾಜಕೀಯ ಬದುಕಿನಲ್ಲಿ ಕಲ್ಲು-ಮುಳ್ಳುಗಳು ಸಮನಾಗಿವೆ. ಬಳ್ಳಾರಿ ಗಣಿ ಕಪ್ಪ ಪ್ರಕರಣ ರಾಜಕೀಯವಾಗಿ ಅವರನ್ನು ಸುಸ್ತು ಮಾಡಿದೆ. ಮೊನ್ನೆಯ ಚಾಮುಂಡೇಶ್ವರಿ ಉಪಚುನಾವಣೆ ಫಲಿತಾಂಶ, ಅಸಮಾಧಾನ ತಂದಿದೆ. ಆದರೆ ಈ ಎಲ್ಲದರ ಮಧ್ಯೆ ದೋಸ್ತಿ ಸರ್ಕಾರವನ್ನು ಯಶಸ್ವಿಯಾಗಿ ನಡೆಸುವ ಆತ್ಮವಿಶ್ವಾಸ ಅವರಲ್ಲಿದೆ.
ಶ್ರೀಸಾಮಾನ್ಯರ ಪ್ರತಿನಿಧಿಯಂತೆ ಕಾಣಿಸುವ ಕುಮಾರಸ್ವಾಮಿ, ಅಧಿಕಾರ ಪಡೆದ ದಿನದಿಂದಲೂ ಪ್ರತಿಪಕ್ಷಗಳು ಗುರ್ ಎನ್ನುತ್ತಲೇ ಇವೆ. ಅಂದ ಹಾಗೆ ಕುಮಾರಸ್ವಾಮಿ ಆಡಳಿತ ಹೇಗಿದೆ ಎನ್ನುವುದರ ಅವಲೋಕನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, December 16, 2006, 23:53 [IST]