ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವರಾಜ್‌ ಸಿಂಗ್‌ ಹಲ್ಲೆ ಪ್ರಕರಣ ಸಂಧಾನದಲ್ಲಿ ಅಂತ್ಯ?

By Staff
|
Google Oneindia Kannada News

Scuffle mars Yuvraj Singh’s birthdayಗುರಗಾಂವ್‌ : ಭಾರತ ಕ್ರಿಕೆಟ್‌ ತಂಡದ ಯುವರಾಜ್‌ ಸಿಂಗ್‌, ತಮ್ಮ ಹುಟ್ಟುಹಬ್ಬದ ದಿನವೇ ಸಹನೆ ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿದ್ದರು.

ಶುಭಾಶಯ ಹೇಳಲು ಬಂದ ಅತಿಥಿ ಮೇಲೆ ಯುವರಾಜ್‌ ಸಿಂಗ್‌ ಕೈ ಮಾಡಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು. ಯುವರಾಜ್‌ ಸಿಂಗ್‌ ಅವರ 25ನೇ ಹುಟ್ಟುಹಬ್ಬದ ಹಿನ್ನೆಲೆ ದೆಹಲಿ ಸಮೀಪದ ಡಿಎಲ್‌ಎಫ್‌ ಪ್ರದೇಶದ ಬಾರ್‌ನಲ್ಲಿ, ಪಾರ್ಟಿಯಾಂದನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗಲಾಟೆ ನಡೆದಿದೆ.

ಹಲ್ಲೆಗೆ ಗುರಿಯಾಗಿರುವ ವ್ಯಕ್ತಿ ಸಿದ್ಧಾರ್ಥ ಮಹಾಜನ್‌. ಅವರ ತಾಯಿ ಮತ್ತು ಪತ್ರಕರ್ತೆ ನೀಲಂ ಮಹಾಜನ್‌, ಯುವರಾಜ್‌ ಸಿಂಗ್‌ ವಿರುದ್ಧ ದೂರು ನೀಡಿದ್ದು, ಸಿದ್ಧಾರ್ಥ ಮತ್ತು ನನಗೆ ಕೊಲೆ ಬೆದರಿಕೆವೊಡ್ಡಲಾಗಿದೆ ಎಂದು ಆರೋಪಿಸಿದ್ದರು.

ಇಷ್ಟಕ್ಕೂ ಆಗಿದ್ದೇನು? : ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿದ್ಧಾರ್ಥ ಮಹಾಜನ್‌, ಕುಡಿದ ಮತ್ತಿನಲ್ಲಿ ಭಾರತ ಕ್ರಿಕೆಟ್‌ ತಂಡವನ್ನು ಅಸಹ್ಯವಾಗಿ ಟೀಕಿಸತೊಡಗಿದರು. ಈ ಸಂದರ್ಭದಲ್ಲಿ ಘರ್ಷಣೆ ನಡೆದಿದೆ. ಗುರುವಾರ ಲಭ್ಯವಿರುವ ವರದಿಗಳ ಪ್ರಕಾರ, ವಿವಾದ ರಾಜಿ ಮೂಲಕ ಬಗೆಹರಿದಿದ್ದು, ನೀಲಂ ಮಹಾಜನ್‌ ದೂರನ್ನು ವಾಪಸ್‌ ಪಡೆದಿದ್ದಾರೆ ಎನ್ನಲಾಗಿದೆ.

ಕ್ರಿಕೆಟಿಗರು ಸಹನೆ ಕಳೆದುಕೊಳ್ಳುವ ಸಂದರ್ಭಗಳು ಈ ಹಿಂದೆ ನಡೆದಿವೆ. ಮೊನ್ನೆಯಷ್ಟೇ ಕ್ಷುಲ್ಲಕ ಕಾರಣಕ್ಕೆ ಹತ್ಯೆಗೆ ಕಾರಣರಾಗಿದ್ದ ಮಾಜಿ ಕ್ರಿಕೆಟಿಗ ನವಜೋಧ್‌ ಸಿಂಗ್‌ ಸಿಧು ಅವರನ್ನು ಆರೋಪಿಯೆಂದು ನ್ಯಾಯಾಲಯ ಘೋಷಿಸಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X