ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ವ್ಯಾಪಕ ಬೆಂಬಲ

By Staff
|
Google Oneindia Kannada News

ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಧೋರಣೆ ವಿರೋಧಿಸಿ, ಗುರುವಾರ ಕೇಂದ್ರ ಮತ್ತು ರಾಜ್ಯಸರ್ಕಾರಿ ನೌಕರರು, ಬ್ಯಾಂಕ್‌ ಸಿಬ್ಬಂದಿ, ವಿಮೆ, ಅಂಚೆ ನೌಕರರು, ಆಟೋ ಚಾಲಕರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಅಖಿಲ ಭಾರತ ಸರ್ಕಾರಿ ನೌಕರರ ಒಕ್ಕೂಟ ಮತ್ತಿತರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಕರ್ನಾಟಕ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಈ ಮುಷ್ಕರದಲ್ಲಿ ಪಾಲ್ಗೊಂಡವರ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸುವುದಾಗಿ ರಾಜ್ಯ ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

ಮುಷ್ಕರದ ಹಿನ್ನೆಲೆ ಅನಾಹುತಗಳ ತಪ್ಪಿಸಲು ಪೊಲೀಸರು ಬಿಗಿಬಂದೋಬಸ್ತು ವ್ಯವಸ್ಥೆ ಮಾಡಿದ್ದಾರೆ.

ಗುರುವಾರ ಯಾರ್ಯಾರು ಮುಷ್ಕರ ಮಾಡುತ್ತಾರೆ?

  • ಬ್ಯಾಂಕ್‌ ಸಿಬ್ಬಂದಿ
  • ವಿಮೆ ಇಲಾಖೆ ನೌಕರರು
  • ಕರ್ನಾಟಕ ಪ್ರಾಂತ ರೈತ ಸಂಘ
  • ಅಖಿಲ ಭಾರತ ಅಂಚೆ ನೌಕರ ಒಕ್ಕೂಟ
  • ಸೆಲ್ಪ್‌ ಎಂಪ್ಲಾಯ್ಡ್‌ ಆಟೋ ಡ್ರೆೃವರ್ಸ್‌ ಆಸೋಸಿಯೇಷನ್‌
  • ನವ ಕರ್ನಾಟಕ ಆಟೊ ಚಾಲಕರ ಸಂಘ
  • ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ
(ದಟ್ಸ್‌ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X