ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈಲ್ವೆ ವಾರ್ತೆ : ರೈಲು ಸಂಚಾರ, ಇಂದಿನಿಂದ ಏರುಪೇರು
ಬೆಂಗಳೂರು : ಬೆಂಗಳೂರು-ಹೊಸಪೇಟೆ-ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲು(ರೈಲು ಸಂಖ್ಯೆ-583/584), ಡಿಸೆಂಬರ್ 12ರಿಂದ 19ರವರೆಗೆ ಚಿತ್ರದುರ್ಗ ಹಾಗೂ ಹೊಸಪೇಟೆ ನಡುವೆ ಸಂಚರಿಸುವುದಿಲ್ಲ ಎಂದು ನೈಋತ್ಯ ರೈಲ್ವೇ ಪ್ರಕಟಣೆಯಾಂದು ಹೇಳಿದೆ.
ಈ ಅವಧಿಯಲ್ಲಿ ರೈಲು ಬೆಂಗಳೂರು ಹಾಗೂ ಚಿತ್ರದುರ್ಗದ ನಡುವೆ ಮಾತ್ರ ಸಂಚರಿಸಲಿದೆ. ಮೈಸೂರು-ಬೆಂಗಳೂರು-ಚೆನ್ನೈ-ಮೈಸೂರು ಕಾವೇರಿ ಎಕ್ಸ್ಪ್ರೆಸ್(ರೈಲು ಸಂಖ್ಯೆ-6221/6222) ಮತ್ತು ಮೈಸೂರು-ಬೆಂಗಳೂರು-ಮಯಿಲಾಡುದುರೈ-ಮೈಸೂರು ಎಕ್ಸ್ಪ್ರೆಸ್(ರೈಲು ಸಂಖ್ಯೆ-6232/6231) ರೈಲುಗಳನ್ನು ಜೋಡಿಸಲಾಗುತ್ತಿದೆ.
ಡಿಸೆಂಬರ್ 15ರಿಂದ ಮೈಸೂರಿನಿಂದ ಜೋಡಣೆಯಾಗಲಿರುವ ಈ ರೈಲು, ಹೆಚ್ಚುವರಿಯಾಗಿ ಒಂದು ತ್ರೀಟೈರ್ ದ್ವಿತೀಯ ದರ್ಜೆ ಸ್ಲೀಪರ್ ಕೋಚ್ ಒಳಗೊಳ್ಳಲಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, December 12, 2006, 23:53 [IST]