ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಡಗೀತೆಗೆ ಕತ್ತರಿ ಹಾಕಿದರೆ ಸುಮ್ಮನಿರುವುದಿಲ್ಲ - ಅಶ್ವಥ್
ಬೆಂಗಳೂರು : ನಾಡಗೀತೆ ಹಾಡಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ಗೀತೆಯಲ್ಲಿನ ಸಾಲುಗಳಿಗೆ ಕತ್ತರಿ ಹಾಕುವುದು ಸಲ್ಲದು. ಅದು ನಾಡು-ನುಡಿಗೆ ಬಗೆಯುವ ದ್ರೋಹ. ಹೀಗೆ ಮಾಡಿದರೆ ನಾನು ಸುಮ್ಮನಿರುವುದಿಲ್ಲ ಎಂದು ಸಂಗೀತ ನಿರ್ದೇಶಕ ಮತ್ತು ಗಾಯಕ ಸಿ.ಅಶ್ವಥ್ ಅಭಿಪ್ರಾಯಪಟ್ಟಿದ್ದಾರೆ.
ಕುವೆಂಪು ಅವರ ಜಯಭಾರತ ಜನನಿಯ ತನುಜಾತೆ ನಾಡಗೀತೆಯನ್ನು ಮೊಟಕುಗೊಳಿಸುವ ಅಧಿಕಾರ ಅವರ ಪುತ್ರರಾದ ತೇಜಸ್ವಿ ಅವರಿಗೂ ಇಲ್ಲ, ಮತ್ಯಾರಿಗೂ ಇಲ್ಲ ಎಂದು ಸುದ್ದಿಗಾರರ ಬಳಿ ಮಾತನಾಡುತ್ತ ಹೇಳಿದರು.
ನಾಡಗೀತೆ ಹಾಡಲು 6.52ನಿಮಿಷ ಬೇಕಾಗುತ್ತದೆ ಎಂದು ಇಟ್ಟುಕೊಳ್ಳೋಣ. ಅದರಿಂದ ನಷ್ಟವೇನೂ ಇಲ್ಲ. ಅನಗತ್ಯವಾಗಿ ಸಾಕಷ್ಟು ಸಮಯ ವ್ಯಯ ಮಾಡುವ ನಾವು, ನಾಡಗೀತೆ ಹಾಡಲು 5-6ನಿಮಿಷ ಬಳಸಿಕೊಂಡರೆ ತಪ್ಪೇನಿಲ್ಲ. ನಾಡಗೀತೆಯ ಕೆಲವು ಸಾಲುಗಳನ್ನು ತೆಗೆಯುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಸಲಹೆ ನೀಡಿದೆ. ಇದು ಸಲ್ಲದು ಸರ್ಕಾರ ನಾಡಗೀತೆಗೆ ಅವಮಾನವಾಗದಂತೆ ಎಚ್ಚರವಹಿಸಬೇಕು ಎಂದು ಅಶ್ವಥ್ ಒತ್ತಾಯಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, December 12, 2006, 23:53 [IST]