ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿವಮೊಗ್ಗ : ಕುಖ್ಯಾತ ರೌಡಿ ತಮಿಳು ಕುಮಾರ್ ಫಿನಿಷ್!
ಶಿವಮೊಗ್ಗ : ಪೊಲೀಸರ ಕಾರ್ಯಾಚರಣೆಯಲ್ಲಿ ಕುಖ್ಯಾತ ರೌಡಿ ತಮಿಳು ಕುಮಾರ್ ಸೋಮವಾರ ಬಲಿಯಾಗಿದ್ದಾನೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ಶಿವಮೊಗ್ಗ ಹೊರವಲಯದ ಹಳೆಬೆನವಳ್ಳಿಯಲ್ಲಿ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು. ಈ ಸಂದರ್ಭದಲ್ಲಿ ಕುಮಾರ್ ಏಕಾಏಕಿ ಗುಂಡಿನ ದಾಳಿ ಮಾಡಿದ. ಈ ಸಂದರ್ಭದಲ್ಲಿ ಪೊಲೀಸರು ಪ್ರತಿದಾಳಿ ನಡೆಸಿದರು ಎಂದಿದ್ದಾರೆ.
ಪೊಲೀಸರು ಮೂರು ಸುತ್ತಿನ ಗುಂಡು ಹಾರಿಸಿದರು. ಈ ಘಟನೆಯಲ್ಲಿ ಸ್ಥಳದಲ್ಲಿಯೇ ಕುಮಾರು ಸಾವನ್ನಪ್ಪಿದ. ನಾಲ್ಕು ಕೊಲೆ, ಎರಡು ಕೊಲೆ ಪ್ರಯತ್ನ ಮತ್ತು ಅನೇಕ ಡಕಾಯಿತಿ ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. ಒಂದು ಪಿಸ್ತೂಲ್ ಮತ್ತಿತರ ವಸ್ತುಗಳನ್ನು ಕಾರ್ಯಾಚರಣೆ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ.
ತಮಿಳು ಕುಮಾರ್ ಹಾರಿಸಿದ ಒಂದು ಗುಂಡು ಶಿವಕುಮಾರ್ ಅವರಿಗೆ ತಗುಲಿದೆ. ಗುಂಡು ನಿರೋಧಕ ವಸ್ತ್ರ ಧರಿಸಿದ್ದರಿಂದ ಅಪಾಯದಿಂದ ಅವರು ಪಾರಾಗಿದ್ದಾರೆ.
(ಯುಎನ್ಐ)
Comments
Story first published: Monday, December 11, 2006, 23:53 [IST]