ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಕ್ಷದಲ್ಲಿ ಗುಂಪುಗಾರಿಕೆ ಬೇಡ : ಯಡಿಯೂರಪ್ಪ ಮನವಿ
ಬೆಂಗಳೂರು : ದೆಹಲಿ ವರಿಷ್ಠರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯೋಗ್ಯರನ್ನೇ ಆಯ್ಕೆಮಾಡಲಿದ್ದು, ಈ ಕುರಿತು ಗುಂಪುಗಾರಿಕೆ ಬೇಡ ಎಂದು ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಭಾನುವಾರ ತಮ್ಮ ಸ್ವಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಕೆಲವು ಶಾಸಕರುಗಳು ಗುಂಪುಗಳಲ್ಲಿ ದೆಹಲಿಗೆ ತೆರಳಿ, ಪಕ್ಷದ ವರಿಷ್ಠರಿಗೆ ತಮ್ಮ ಅಭಿಪ್ರಾಯ ತಿಳಿಸಿ ಬಂದಿದ್ದಾರೆ. ಎಲ್ಲರ ಅಭಿಪ್ರಾಯ ಪರಿಶೀಲಿಸಿ ವರಿಷ್ಠ ಮಂಡಳಿ ತೀರ್ಮಾನ ಕೈಗೊಳ್ಳಲಿದೆ. ಆದರೆ ಶಾಸಕರು ಪದೇ ಪದೇ ಇಂತಹ ಕೆಲಸದಲ್ಲಿ ತೊಡಗಿದರೆ ಜನರಲ್ಲಿ ಅನಗತ್ಯ ಗೊಂದಲ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿಯಲ್ಲಿ ಯಡಿಯೂರಪ್ಪ ಬಣ, ಅನಂತ್ಕುಮಾರ್ ಬಣ ಎಂಬುದಿಲ್ಲ. ಇರುವುದು ಬಿಜೆಪಿ ಬಣ ಮಾತ್ರ. ಆ ಬಣ, ಈ ಬಣ ಎಂದು ಹೇಳಿಕೊಳ್ಳುವ ಮೂಲಕ ಶಾಸಕರು ಜನರಿಗೆ ತಪ್ಪು ಸಂದೇಶ ರವಾನಿಸಬಾರದು ಎಂದು ವಿನಂತಿಸಿದರು.
(ಏಜನ್ಸೀಸ್)
Comments
Story first published: Sunday, December 10, 2006, 23:53 [IST]