ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.29ರಿಂದ ಕುಪ್ಪಳ್ಳಿಯಲ್ಲಿ ಜೀವವೈವಿಧ್ಯ ನಿಸರ್ಗೋತ್ಸವ

By Staff
|
Google Oneindia Kannada News

ಬೆಂಗಳೂರು : ರಾಷ್ಟ್ರಕವಿ ಕುವೆಂಪು ಊರು ಕುಪ್ಪಳ್ಳಿಯಲ್ಲಿ ಡಿಸೆಂಬರ್‌ 29ರಿಂದ 31ರವರೆಗೆ ‘ಜೀವವೈವಿಧ್ಯ ನಿಸರ್ಗೋತ್ಸವ’ ನಡೆಯಲಿದೆ.

ಕುವೆಂಪು ಜನ್ಮದಿನೋತ್ಸವ ಅಂಗವಾಗಿ ಈ ಕಾರ್ಯಕ್ರಮ ನಡೆಯಲಿದ್ದು, ಕುವೆಂಪು ಪ್ರತಿಷ್ಠಾನ, ಪರಿಸರ ಇಲಾಖೆ ಹಾಗೂ ಶಿವಮೊಗ್ಗ ಅರಣ್ಯ ಇಲಾಖೆ ಜಂಟಿಯಾಗಿ ಆಯೋಜಿಸಿವೆ.

ಈ ನಿಮಿತ್ತ ಕುವೆಂಪು ಸಾಹಿತ್ಯದಲ್ಲಿ ಪರಿಸರ ಎಂಬ ವಿಚಾರಗೋಷ್ಠಿ ಏರ್ಪಡಿಸಲಾಗಿದೆ. ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಕೆ.ಪಿ.ಪೂರ್ಣಚಂದ್ರತೇಜಸ್ವಿ, ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ-ಸೇನಾನಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಸ್ಯ ಶಾಸ್ತ್ರಜ್ಞರು, ಪ್ರಾಣಿತಜ್ಞರು ಹಾಗೂ ಪಕ್ಷಿ ತಜ್ಞರೊಂದಿಗೆ ಚಾರಣ ವ್ಯವಸ್ಥೆ ಕೂಡ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತಿಯುಳ್ಳವರು ಸಂಪರ್ಕಿಸಿ :

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ

ದೂರವಾಣಿ-08181-274120

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X