ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬಿಕ್ಕಟ್ಟು : ಡಿವಿಎಸ್‌ ಮುಂದುವರಿಕೆಗೆ ಒತ್ತಾಯ

By Staff
|
Google Oneindia Kannada News

ನವದೆಹಲಿ : ಕರ್ನಾಟಕ ಘಟಕ ಬಿಜೆಪಿ ಅಧ್ಯಕ್ಷರನ್ನಾಗಿ ಡಿ.ವಿ.ಸದಾನಂದಗೌಡರನ್ನೇ ಮುಂದುವರಿಸಬೇಕೆಂದು ಶಾಸಕರ ಗುಂಪೊಂದು ಪಕ್ಷದ ನಾಯಕರಿಗೆ ಒತ್ತಾಯ ಮಾಡಿದೆ.

ಸುಮಾರು 50ಜನ ಶಾಸಕರನ್ನೊಳಗೊಂಡ ಗುಂಪು, ಶನಿವಾರ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಜಯ್‌ ಜೋಷಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿತು.

ಭಾನುವಾರ ಪಕ್ಷದ ಅಧ್ಯಕ್ಷ ರಾಜ್‌ನಾಥ್‌ಸಿಂಗ್‌, ಹಿರಿಯ ನಾಯಕರಾದ ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ ಅವರನ್ನು ಭೇಟಿಮಾಡಿ, ಈ ಕುರಿತು ಒತ್ತಾಯ ಮಾಡುವ ನಿರೀಕ್ಷೆ ಇದೆ.

ಅನಂತ್‌ ಮೇಲೆ ಡಿವಿಎಸ್‌ ಕಿಡಿಕಿಡಿ :ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕರ್ನಾಟಕ ಘಟಕ ಬಿಜೆಪಿ ಅಧ್ಯಕ್ಷ ಡಿ.ವಿ.ಸದಾನಂದಗೌಡ, ಅಧಿಕಾರಕ್ಕಾಗಿ ದೆಹಲಿಯಲ್ಲಿ ಕುಳಿತ ಪಕ್ಷದ ನಾಯಕರೊಬ್ಬರು ಗುಂಪುಗಾರಿಕೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಅವರು ಪರೋಕ್ಷವಾಗಿ ಸಂಸದ ಅನಂತ್‌ಕುಮಾರ್‌ ಮೇಲೆ ಹರಿಹಾಯ್ದಿದ್ದಾರೆ.

ಈ ಹಿನ್ನೆಲೆಯಲ್ಲಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X