ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಧ್ಯ ಸಸ್ಪೆಂಡ್‌ : ದೇವೇಗೌಡರ ಹಳೆಯ ವರಸೆ ಶುರು!

By Staff
|
Google Oneindia Kannada News

ಬೆಂಗಳೂರು : ಪಕ್ಷ ವಿರೋಧಿ ಚಟುವಟಿಕೆಯ ಕಾರಣ ನೀಡಿ, ಮಾಜಿ ಸಚಿವ ಮತ್ತು ಹಾಲಿ ಶಾಸಕ ಪಿ.ಜಿ.ಆರ್‌.ಸಿಂಧ್ಯ ಅವರನ್ನು ಜೆಡಿಎಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ.

ಜೆಡಿಎಸ್‌ ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ನೀಡಿದ್ದಲ್ಲದೇ, ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಸಿಂಧ್ಯ ಪ್ರಚಾರ ಮಾಡಿದ್ದಾರೆ. ಶಿಸ್ತುಕ್ರಮ ಉಲ್ಲಂಘಿಸಿದ ಸಿಂಧ್ಯ ವಿರುದ್ಧ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಜೆಡಿಎಸ್‌ನ ವರಿಷ್ಠರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಲು ಸಿಂಧ್ಯ ನಿರಾಕರಿಸಿದ್ದು, ತಮ್ಮ ಮುಂದಿನ ಹೆಜ್ಜೆಯನ್ನು ಸ್ಪಷ್ಪಪಡಿಸಿಲ್ಲ. ಆದರೆ ಸಿಂಧ್ಯ ಅವರು ಕಾಂಗ್ರೆಸ್‌ ಪ್ರವೇಶಿಸಲಿದ್ದಾರೆ. ದೇವೇಗೌಡರ ಕುಟುಂಬ ರಾಜಕೀಯ ವಿರೋಧಿಸಿದವರಿಗೆ ಇಂತಹ ಶಿಕ್ಷೆ(?) ಮೊದಲಿನಿಂದಲೂ ಇದ್ದೇ ಇದೆ ಎಂದು ಅವರ ಬೆಂಬಲಿಗರು ಅಭಿಪ್ರಾಯಪಟ್ಟಿದ್ದಾರೆ.

ಜೆಡಿಎಸ್‌ ಶಾಸಕರ ಸಭೆ : ಚಾಮುಂಡೇಶ್ವರಿ ಉಪಚುನಾವಣೆಯ ಸೋಲಿನ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕೆಲವು ಸಚಿವರ ವರ್ತನೆ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಅಂತಿಮವಾಗಿ ಕುಮಾರಸ್ವಾಮಿ ನಾಯಕತ್ವಕ್ಕೆ ಬೆಂಬಲ ಘೋಷಿತವಾಯಿತು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X