ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಿಜೆಪಿ ಬಿಕ್ಕಟ್ಟು : ರಾಷ್ಟ್ರನಾಯಕರಿಗೆ ತಲೆನೋವು!

By Staff
|
Google Oneindia Kannada News

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಕಾವೇರುತ್ತಿದೆ. ಅನಂತಕುಮಾರ್‌ ಮತ್ತು ಯಡಿಯೂರಪ್ಪ ಬಣಗಳು ಶಕ್ತಿ ಪ್ರದರ್ಶನಕ್ಕೆ ನಿಂತಿದ್ದು, ಬಿಕ್ಕಟ್ಟು ಬಗೆಹರಿಸಲು ಪಕ್ಷದ ರಾಷ್ಟ್ರ ನಾಯಕರು ಡಿ.11ರಂದು ಸಭೆ ಕರೆದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಡಿ.ವಿ.ಸದಾನಂದ ಗೌಡರನ್ನು, ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಸಾರಥ್ಯವನ್ನು ಮುಂದುವರೆಸಬೇಕು ಎಂದು ಒಂದು ಬಣ ಪಟ್ಟು ಹಿಡಿದಿಟ್ಟು, ವರಿಷ್ಠರ ಮುಂದೆ ಸಾಮಾರ್ಥ್ಯ ಪ್ರದರ್ಶಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬಣದೊಳಗಿನ 60ಶಾಸಕರು ಶನಿವಾರ ನವದೆಹಲಿಗೆ ತೆರಳುತ್ತಿದ್ದಾರೆ.

ಕಳೆದ ವಾರವಷ್ಟೇ ಅನಂತ್‌ಕುಮಾರ ಬಣದ ಕೆಲವರು, ನವದೆಹಲಿಯಲ್ಲಿ ಸದಾನಂದಗೌಡ ಮತ್ತು ಯಡಿಯೂರಪ್ಪನವರ ವಿರುದ್ಧ ದೂರುಗಳನ್ನು ನೀಡಿತ್ತು. ನವದೆಹಲಿಯಲ್ಲಿ ನಡೆಯಲಿರುವ ಡಿ.11ರ ಸಭೆ, ಬಿಕ್ಕಟ್ಟು-ಇಕ್ಕಟ್ಟಿಗೆ ತೆರೆ ಎಳೆಯುವುದೇ ಎಂಬುದನ್ನು ಕಾದು ನೋಡಬೇಕು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X