ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮರು ಎಣಿಕೆ ಪ್ರಶ್ನೆಯೇ ಇಲ್ಲ : ಚುನಾವಣಾ ಆಯೋಗ
ಮೈಸೂರು : ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಬೆರಳೆಣಿಕೆ ಮತಗಳ ಅಂತರದಿಂದ ಕಾಂಗ್ರೆಸ್ನ ಸಿದ್ದರಾಮಯ್ಯ ಗೆದ್ದಿದ್ದಾರೆ. ಮರು ಮತಎಣಿಕೆ ನಡೆಸಿ ಎಂಬ ಜೆಡಿಎಸ್ ನಾಯಕರ ಮನವಿಯನ್ನು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ರಾಮಶೇಷನ್ ತಳ್ಳಿಹಾಕಿದ್ದಾರೆ.
ಗುರುವಾರ ಮಧ್ಯಾಹ್ನ ಚುನಾವಣಾ ಫಲಿತಾಂಶ ಪ್ರಕಟಿಸಿದ ಅವರು, ಮರು ಮತಎಣಿಕೆಯ ಪ್ರಶ್ನೆಯೇ ಇಲ್ಲ . ಚುನಾವಣೆ ಶಾಂತಯುತವಾಗಿ ನಡೆದಿರುವುದು ಮನಸ್ಸಿಗೆ ಸಂತೋಷ ತಂದಿದೆ ಎಂದರು.
ಯಾರಿಗೆ ಎಷ್ಟು ಮತ? :
- ಒಟ್ಟು ಮತದಾನ -2.44,507(ಶೇ.66)
- ಸಿದ್ದರಾಮಯ್ಯ(ಕಾಂಗ್ರೆಸ್) -1.15,512
- ಶಿವಬಸಪ್ಪ(ಜೆಡಿಎಸ್) - 1,15,255
- ಎ.ಎಸ್.ಗುರುಸ್ವಾಮಿ(ಜೆಡಿಯು) -941
- ಬಿ.ಕರುಣಾಕರಣ್(ಸಮಾಜವಾದಿ) -3,304
- ನಾಗರಾಜು(ಪಕ್ಷೇತರ) -596
- ಎಂ.ಕೆ.ಪ್ರೇಮ್ ಕುಮಾರ್(ಪ) -460
- ರಾಜು(ಪ) -367
- ಎಂ.ಎಸ್.ರುದ್ರಸ್ವಾಮಿ(ಪ) -682
- ಪಿ.ಎನ್.ಶ್ರೀನಾಥ್(ಪ) -1,385
- ಸರ್ವೋತ್ತಮ(ಪ) -4,183
Comments
Story first published: Thursday, December 7, 2006, 23:53 [IST]